Advertisement

ಕೋವಿಡ್ 19: ರಾಜಕೀಯ ಭವಿಷ್ಯ ನುಡಿಯುತ್ತಿದ್ದ ಖ್ಯಾತ ಜ್ಯೋತಿಷಿ ಬೇಜಾನ್ ದಾರುವಾಲಾ ಇನ್ನಿಲ್ಲ

08:16 PM May 29, 2020 | Nagendra Trasi |

ನವದೆಹಲಿ:ಕೋವಿಡ್ 19 ಮಹಾಮಾರಿಯ ಸೋಂಕಿನಿಂದ ಭಾರತದ ಪ್ರತಿಷ್ಠಿತ ಜ್ಯೋತಿಷಿ ಬೇಜಾನ್ ದಾರುವಾಲಾ (90ವರ್ಷ) ಅಹಮ್ಮದಾಬಾದ್ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿರುವುದಾಗಿ ವರದಿ ತಿಳಿಸಿದೆ. ದಾರುವಾಲಾಗೆ ದೇಶಾದ್ಯಂತ ಲಕ್ಷಾಂತರ ಮಂದಿ ಅನುಯಾಯಿಗಳಿದ್ದರು ಎಂದು ವರದಿ ವಿವರಿಸಿದೆ.

Advertisement

ಕೆಲವು ದಿನಗಳ ಹಿಂದಷ್ಟೇ ಜ್ಯೋತಿಷಿ ಬೇಜಾನ್ ಅವರನ್ನು ಪರೀಕ್ಷೆಗೊಳಪಡಿಸಿದಾಗ ಕೋವಿಡ್ 19 ವೈರಸ್ ಪಾಸಿಟಿವ್ ವರದಿ ಬಂದಿತ್ತು. ಕಳೆದ ಕೆಲವು ದಿನಗಳಿಂದ ಅಹಮ್ಮದಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ವರದಿ ತಿಳಿಸಿದೆ.

ದಾರುವಾಲಾ ಗಣೇಶನ ಪರಮ ಭಕ್ತರಾಗಿದ್ದು, ದೇಶದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಗಣೇಶ ಸ್ಪೀಕ್ಸ್ ಎಂಬ ಹೆಸರಿನಲ್ಲಿ ಜ್ಯೋತಿಷ್ಯ ಅಂಕಣ ಬರೆಯುತ್ತಿದ್ದರು. ದಾರುವಾಲಾ ಅವರ ಭವಿಷ್ಯ ಜನರು ನಂಬುತ್ತಿದ್ದರು. ಅಲ್ಲದೇ ದೇಶಾದ್ಯಂತ ಅಪಾರ ಸಂಖ್ಯೆಯಲ್ಲಿ ದಾರುವಾಲಾ ಅವರ ಅನುಯಾಯಿಗಳಿದ್ದರು ಎಂದು ವರದಿ ಹೇಳಿದೆ.

ದೇಶದ ರಾಜಕೀಯ ಭವಿಷ್ಯವನ್ನು ನುಡಿಯುವಲ್ಲಿ ಸಿದ್ಧಹಸ್ತರಾಗಿದ್ದ ಬೇಜಾನ್ ದಾರುವಾಲಾ ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ, ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಿ ಆಯ್ಕೆಯಾಗುವುದನ್ನು ಭವಿಷ್ಯ ನುಡಿದಿದ್ದರು. ಅಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿ ಬಗ್ಗೆಯೂ ದಾರುವಾಲಾ ಭವಿಷ್ಯ ನುಡಿದಿದ್ದರು. ರಾಜೀವ್ ಗಾಂಧಿ ಅವರ ಹತ್ಯೆ, ಸಂಜಯ್ ಗಾಂಧಿ ದುರಂತ, ಭೋಪಾಲ್ ಗ್ಯಾಸ್ ದುರಂತದ ಬಗ್ಗೆಯೂ ದಾರುವಾಲಾ ಭವಿಷ್ಯ ನುಡಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next