Advertisement

11 ಜನರನ್ನು ಬಲಿತೆಗೆದುಕೊಂಡ ಅಪಘಾತಕ್ಕೆ ನೈಸ್ ಸಂಸ್ಥೆ ಹೊಣೆಯಲ್ಲ : ಅಶೋಕ್ ಖೇಣಿ

07:40 PM Jan 23, 2021 | Team Udayavani |

ಬೀದರ್ : ಹುಬ್ಬಳ್ಳಿ- ಧಾರವಾಡ ಹೆದ್ದಾರಿ ಮೇಲೆ ಇತ್ತಿಚೆಗೆ 11 ಜನ ಪ್ರವಾಸಿಗರ ದುರ್ಮರಣ ಮನಸ್ಸಿಗೆ ನೋವಾಗಿದೆ. ಆದರೆ, ಈ ಘಟನೆಗೆ ರಸ್ತೆ ಗುತ್ತಿಗೆ ಪಡೆದಿರುವ ನೈಸ್ ಸಂಸ್ಥೆ ಹೊಣೆ ಎಂಬ ಆರೋಪ ಸುಳ್ಳು ಎಂದು ನೈಸ್ ಮುಖ್ಯಸ್ಥರಾದ ಮಾಜಿ ಶಾಸಕ ಅಶೋಕ ಖೇಣಿ ಪ್ರತಿಕ್ರಿಯಿಸಿದ್ದಾರೆ.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗೆ ಉತ್ತರಿಸಿದ ಅವರು, ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಯಲಿಲ್ಲ. ಹೆದ್ದಾರಿ ಮೇಲೆ ಸಾಕಷ್ಟು ವಾಹನ ದಟ್ಟಣೆ ಹೆಚ್ಚಿದೆ. ಹಾಗಾಗಿ ರಸ್ತೆಯನ್ನು ಈ ಹಿಂದೆ 4 ಲೈನ್ ಮತ್ತು 6 ಲೈನ್ ಆಗಿ ಮೇಲ್ದರ್ಜೇಗೇರಿಸಬೇಕೆಂದು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆದರೆ, ಇಬ್ಬರು ಸಚಿವರ ಕಿತ್ತಾಟದಿಂದಾಗಿ ಹಾಗೆಯೇ ಉಳಿದಿದೆ.

ಇದನ್ನೂ ಓದಿ:ಫೆಬ್ರವರಿಯಿಂದ ರೈಲುಗಳಲ್ಲೇ ದೊರೆಯಲಿದೆ ಆಹಾರ; 10 ತಿಂಗಳುಗಳ ಬಳಿಕ ಸೇವೆ ಪುನರಾರಂಭ

ಘಟನೆ ಬಳಿಕ ಸ್ಥಳೀಯ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next