Advertisement

Art;ನೀರಿದ್ದ ಬಟ್ಟಲಿನಲ್ಲಿ ಅರಳಿದ ಶ್ರೀರಾಮ ಮಂದಿರ

11:51 PM Jan 09, 2024 | |

ಶಿರಸಿ: ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಬನ ವಾಸಿಯ ಹವ್ಯಾಸಿ ಕಲಾವಿದ, ಪುರೋ ಹಿತ ಗಣೇಶ ಖರೆ ಅವರು ನೀರಿನ ಬಟ್ಟಲಿನಲ್ಲಿ ರಂಗೋಲಿ ಪುಡಿಯಿಂದ ಶ್ರೀರಾಮಚಂದ್ರ ಹಾಗೂ ಅಯೋ ಧ್ಯೆಯ ಭವ್ಯ ಶ್ರೀರಾಮಮಂದಿರ ಚಿತ್ರಿಸಿ ಗಮನ ಸೆಳೆದರು. ಮಧುಕೇಶ್ವರ ದೇವಾ ಲಯದಲ್ಲಿ ಮಂಗಳವಾರ ಬೆಳಗ್ಗೆ 8ರಿಂದ ಆರಂಭಿಸಿ ಸತತ ಮೂರು ತಾಸು ಗಳಲ್ಲಿ ಮೂರು ಅಡಿ ವೃತ್ತದ ನೀರಿದ್ದ ಬಟ್ಟಲಿನಲ್ಲಿ ರಂಗೋಲಿ ಹುಡಿ ಚೆಲ್ಲಿ ಹತ್ತಕ್ಕೂ ಅಧಿಕ ಬಣ್ಣ ಬಳಸಿ ಅಯೋಧ್ಯೆ ಶ್ರೀರಾಮ ಮಂದಿರ, ಶ್ರೀರಾಮಚಂದ್ರ ದೇವರ ಚಿತ್ರ ರಚಿಸಿದರು. ಶಾಸಕ ಶಿವರಾಮ ಹೆಬ್ಟಾರ್‌ ಈ ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next