Advertisement

ಅಸ್ಸಾಂಗೆ ಸೋಲುಣಿಸಿದ ಅರ್ಜುನ್‌

09:00 AM Oct 20, 2018 | Team Udayavani |

ಮುಂಬಯಿ: ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡುಲ್ಕರ್‌ ಅವರ ಪುತ್ರ, ಅರ್ಜುನ್‌ ತೆಂಡುಲ್ಕರ್‌ ಕ್ರಿಕೆಟ್‌ ಲೋಕದಲ್ಲಿ ನಿಧಾನವಾಗಿ ಫಾರ್ಮ್ ಕಂಡುಕೊಳ್ಳುತ್ತಿದ್ದಾರೆ. ಅರ್ಜುನ್‌ (7-2-14-3) ಅವರ ಮಾರಕ ಬೌಲಿಂಗ್‌ ದಾಳಿಯ ನೆರವಿನಿಂದ ವಿನೂ ಮಂಕಡ್‌ ಏಕದಿನ ಕ್ರಿಕೆಟ್‌ ಕೂಟದಲ್ಲಿ ಅಸ್ಸಾಂ ವಿರುದ್ಧ ಮುಂಬಯಿ 10 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿತು. 

Advertisement

ಮೊದಲು ಬ್ಯಾಟಿಂಗ್‌ ಮಾಡಿದ್ದ ಅಸ್ಸಾಂ 40.4 ಓವರ್‌ಗಳಲ್ಲಿ ಕೇವಲ 99 ರನ್ನಿಗೆ ಆಲೌಟಾಯಿತು. ಈ ಗುರಿ ಬೆನ್ನಟ್ಟಿದ ಮುಂಬಯಿ ತಂಡ ಯಶಸ್ವಿ ಜೈಸ್ವಾಲ್‌ ಅವರ ಬ್ಯಾಟಿಂಗ್‌ ನೆರವಿನಿಂದ ಕೇವಲ 22 ಓವರ್‌ಗಳಲ್ಲಿ ಗೆಲುವಿನ ಗುರಿ ಸೇರಿತು. ಸದ್ಯ ಕೂಟದಲ್ಲಿ ಮುಂಬಯಿ 6 ಪಂದ್ಯ ಆಡಿದ್ದು ನಾಲ್ಕರಲ್ಲಿ ಜಯ ಗಳಿಸಿದೆ. ಅರ್ಜುನ್‌ ಒಟ್ಟಾರೆ 13 ವಿಕೆಟ್‌ ಕಬಳಿಸಿ ಕೂಟದಲ್ಲೇ ಗರಿಷ್ಠ ವಿಕೆಟ್‌ ಕಿತ್ತ ಬೌಲರ್‌ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಅಂಡರ್‌-19 ಲಂಕಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅರ್ಜುನ್‌ ಅಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಇದರಿಂದಾಗಿ ಅವರು ಟೀಕೆಗೂ ಗುರಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next