Advertisement

ಸೆಂಟಿಮೆಂಟ್‌ ಆರಾಧ್ಯ: ಕಿರುಚಿತ್ರದಲ್ಲಿ ಅಪ್ಪ, ಮಗಳ ಬಾಂಧವ್ಯ

04:39 PM Sep 21, 2021 | Team Udayavani |

ಅಪ್ಪ-ಮಗಳ ಸೆಂಟಿಮೆಂಟ್‌ ಅಂಶಗಳನ್ನಿಟ್ಟುಕೊಂಡು ತಯಾರಾಗಿರುವ “ಆರಾಧ್ಯ’ ಎಂಬ ಕಿರುಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

ಪತ್ರಕರ್ತ ಹಾಗೂ ಕಲಾವಿದನಾಗಿ ಗುರುತಿಸಿಕೊಂಡಿರುವ ಯತಿರಾಜ್‌ ಈ ಕಿರುಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಜೊತೆಗೆ ಚಿತ್ರದಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಲಾಕ್‌ಡೌನ್‌ನಲ್ಲಿ ಸಾಕಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ಯತಿರಾಜ್‌, “ಆರಾಧ್ಯ’ ಮೂಲಕ ಹದಿನೆಂಟನೇ ಕಿರುಚಿತ್ರ.

ಇದನ್ನೂ ಓದಿ:ಕಿಟ್ಟಿ ‘ಗೌಳಿ’ಗೆ ಮುಹೂರ್ತ: ಪಾವನಾ ಗೌಡ ನಾಯಕಿ

ತಮ್ಮ ಕಿರುಚಿತ್ರದ ಬಗ್ಗೆ ಮಾತನಾಡುವ ಯತಿರಾಜ್‌, “ಕಳೆದ ವರ್ಷ ಕೊರೊನಾ ಬಂದ ಮೇಲೆ ಆಯಾ ಸಂದರ್ಭಕ್ಕೆ ತಕ್ಕ ಹಾಗೆ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಆದರೆ ಆರಾಧ್ಯ ತುಂಬಾ ಮನಸ್ಸಿಗೆ ಹತ್ತಿರವಾಯಿತು. ಮನೆಯಲ್ಲಿ  ತಂದೆಯಾದವನಿಗೆ ಜವಾಬ್ದಾರಿ ಇಲ್ಲದೇ ಇಲ್ಲದಾಗ, ಮಕ್ಕಳಿಗೆ ಯಾವ ರೀತಿ ತೊಂದರೆಯಾಗುತ್ತದೆ ಎಂಬುದನ್ನು ಹೇಳುವುದೇ ಇದರ ಕಥೆ’ ಎಂದರು.

ಕಿರುಚಿತ್ರದಲ್ಲಿ ಬೇಬಿ ಆರಾಧ್ಯ ನಟಿಸಿದ್ದಾರೆ. “ನಾನು ಮೂರು ಕಿರುಚಿತ್ರಗಳಲ್ಲಿ ನಟಿಸಿದ್ದೇನೆ. ಅದರಲ್ಲಿ ಎರಡು ಯತಿರಾಜ್‌ ಅವರ ಜೊತೆ. ನಮ್ಮ ಕಿರುಚಿತ್ರವನ್ನು ನೋಡಿ ಹರಸಿ’ ಎಂಬುದು ಆರಾಧ್ಯ ಮನವಿ. ಉಳಿದಂತೆ ಅಂಜಲಿ, ಶಾಂತಕುಮಾರ್‌ ನಟಿಸಿದ್ದಾರೆ. ಕಿರು ಚಿತ್ರಕ್ಕೆ ಜೀವನ್‌ ಅವರ ಛಾಯಾಗ್ರಹಣ, ಸಂಕಲನ ಹಾಗೂ ವಿನು ಮನಸು ಸಂಗೀತವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next