Advertisement

ತಾಜ್‌ನಲ್ಲಿ ಆರತಿ ಎತ್ತಿ ಗಂಗಾಜಲ ಸಿಂಪಡಿಸಿದ ಮಹಿಳೆಯರು

12:18 PM Nov 19, 2018 | Harsha Rao |

ಆಗ್ರಾ: ಪ್ರೇಮಸೌಧ ತಾಜ್‌ಮಹಲ್‌ನಲ್ಲಿ ಮುಸ್ಲಿಮರು ನಮಾಜ್‌ ಮಾಡಿದ್ದನ್ನು ಖಂಡಿಸಿ ಬಲಪಂಥೀಯ ಸಂಘಟನೆಯ ಮಹಿಳೆಯರ ಗುಂಪೊಂದು ರವಿವಾರ ತಾಜ್‌ಮಹಲ್‌ನಲ್ಲಿ ಆರತಿ ಎತ್ತಿ, ಗಂಗಾಜಲವನ್ನು ಸಿಂಪಡಿಸಿದ ಘಟನೆ ನಡೆದಿದೆ. ಶುಕ್ರವಾರ ಹೊರತುಪಡಿಸಿ ಬೇರೆ ದಿನ ಇಲ್ಲಿ ನಮಾಜ್‌ ಮಾಡುವಂತಿಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ ಸೂಚನೆ ನೀಡಿದ್ದರೂ ಬುಧವಾರ ಕೆಲವರು ನಮಾಜ್‌ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ರಾಷ್ಟ್ರೀಯ ಬಜರಂಗ ದಳದ ಮಹಿಳಾ ಘಟಕದ ಸದಸ್ಯರು, ಆರತಿ ಎತ್ತಿ, ಸ್ಮಾರಕವನ್ನು ಗಂಗಾಜಲದಿಂದ ಶುದ್ಧೀಕರಿಸಿದ್ದಾಗಿ ಹೇಳಿಕೊಂಡಿದ್ದಾರೆ ಎಂದು ಐಎಎನ್‌ಎಸ್‌ ವರದಿ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next