Advertisement

ಉಪಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಬೇಸರವಿಲ್ಲ: ಅರಗ ಜ್ಞಾನೇಂದ್ರ

09:56 AM Feb 09, 2020 | keerthan |

ಶಿವಮೊಗ್ಗ: ಉಪಚುನಾವಣೆಯಲ್ಲಿ ಗೆದ್ದು ಬಂದ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ನನಗೇನು ಬೇಸರವಿಲ್ಲ. ಸಚಿವ ಸ್ಥಾನಕ್ಕೆ 10 ಜನರ ಅಯ್ಕೆ ಸಮಂಜಸವಾಗಿದೆ ಎಂದು ತೀರ್ಥಹಳ್ಳಿ‌ ಶಾಸಕ‌ ಅರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

Advertisement

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಆ ಶಾಸಕರು ಬರಲಿಲ್ಲ ಅಂದ್ರೆ ನಮ್ಮ‌ ಸರ್ಕಾರ ರಚನೆಯಾಗುತ್ತಿರಲಿಲ್ಲ. ಅವರಿಗೆ ಕೊಟ್ಟಿದ್ದಕ್ಕೆ ನನಗೆ ಬೇಸರ ಇಲ್ಲ. ಒಳ್ಳೆಯದಾಗಿದೆ ಎಂದರು.

ನಾವು ಪಕ್ಷದಲ್ಲಿ ಹಿರಿಯರಿದ್ದೇವೆ. ನನಗೆ ಸಚಿವ ಸ್ಥಾನ ನೀಡಿ ಎಂದು ಕೇಳಿದ್ದೇನೆ. ನನ್ನ ಅಯ್ಕೆಯ ಬಗ್ಗೆ ಪಕ್ಷದಲ್ಲಿ ಹಾಗೂ ನಾಯಕರಲ್ಲಿ ವಿರೋಧವಿಲ್ಲ. ಮುಖ್ಯಮಂತ್ರಿಯವರು ನನ್ನ‌ ಬಗ್ಗೆ ಪ್ರೀತಿ ಮತ್ತು ಕಾಳಜಿ ಹೊಂದಿದ್ದಾರೆ ಎಂದರು.

ಮುಖ್ಯಮಂತ್ರಿ ಗಳು ಹಾಗೂ ನಾನು‌ ಜೊತೆಯಲ್ಲಿ ಬೆಳೆದವರು. ಯಡಿಯೂರಪ್ಪ ನಾನು‌ ಆತ್ಮೀಯರಿದ್ದೇವೆ, ಸ್ವಲ್ಪ ಕಾಲ ಕಾಯಿರಿ ಎಂದು ಹೇಳಿದ್ದಾರೆ. ಪಕ್ಷಕ್ಕಾಗಿ ತ್ಯಾಗ ಮತ್ತು ಬಲಿದಾನವನ್ನ ಮಾಡುತ್ತಾ ಇದ್ದೇನೆ. ಅದು ನಮ್ಮ ಪಕ್ಷದ ಸಿದ್ದಾಂತ ಎಂದು ತೀರ್ಥಹಳ್ಳಿ ಶಾಸಕರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next