Advertisement

ಹಕ್ಕುಪತ್ರಕ್ಕೆ ಆಗ್ರಹಿಸಿ ಡಿಸಿಗೆ ಮನವಿ

02:29 PM May 22, 2020 | Suhan S |

ಶಿಗ್ಗಾವಿ: ಕಳೆದ 26 ವರ್ಷದಿಂದ ತಾಲೂಕಿನ ಹೆಳವ ತರ್ಲಘಟ್ಟ ಗ್ರಾಮದ ಕಂದಾಯ ಇಲಾಖೆಗೆ ಸೇರಿದ 212 ಎಕರೆ ಜಮೀನನ್ನು ಸಾಗುವಳಿ ಮಾಡುತ್ತಿರುವ ರೈತ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಉತ್ತರ ಕರ್ನಾಟಕ ರೈತ ಸಂಘ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

Advertisement

ಕಂದಾಯ ಇಲಾಖೆಯ ಸಂಬಂಧಿತ ಹುಲ್ಲುಗಾವುಲು ಪ್ರದೇಶವಾದ ಈ ಜಮೀನನ್ನು 2004ರ ವರೆಗೆ 26 ವರ್ಷದಿಂದ 80 ರೈತರು ನಿರಂತರ ಸಾಗುವಳಿ ಮಾಡಿದ್ದಾರೆ. ಬಳಕೆ ಬಗ್ಗೆ ಆಕ್ಷೇಪಿಸಿದ ಇಲಾಖೆ ವಿರುದ್ಧ ಧಾರವಾಡ ಉಚ್ಚ ನ್ಯಾಯಾಲಯದ ನ್ಯಾಯದ ಮೊರೆ ಹೋದ ರೈತರು, ನಮಗೆ ಬದುಕಿಗೆ ಯಾವುದೇ ಕೃಷಿ ಭೂಮಿ ಇಲ್ಲ. ಅಕ್ರಮ-ಸಕ್ರಮ ಯೋಜನೆಯಡಿ ಸಕ್ರಮಗೊಳಿಸಲು ಕೋರಿದ್ದರು. ಮನವಿ ಆಲಿಸಿದ ನ್ಯಾಯಾಲಯವು ಅಕ್ರಮ-ಸಕ್ರಮ ಸಮಿತಿಯಲ್ಲಿ ನಿರ್ಣಯಿಸಿ ರೈತರಿಗೆ ನ್ಯಾಯ ನೀಡುವಂತೆ ಆದೇಶಿಸಿದೆ. ಆದರೆ, ಇಲ್ಲಿವರೆಗೂ ಸಮಿತಿ ರಚನೆಯಾಗಿಲ್ಲ. ರೈತರಿಗೆ ನ್ಯಾಯ ಸಿಕ್ಕಿಲ್ಲ. ಈಗ ಅರಣ್ಯ ಇಲಾಖೆ ಗಿಡ ನೆಡಲು ಮುಂದಾಗುತ್ತಿದೆ. ಇದನ್ನು ತಡೆದು ರೈತರ ಜೀವನೋಪಾಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next