Advertisement

ಜನ್ಮತಃ ಮಾತೂ ಬಾರದು ಕಿವಿಯೂ ಕೇಳಿಸದ ಅನುಶ್ ವಾಣಿಜ್ಯ ವಿಭಾಗದಲ್ಲಿ ಸಾಧನೆ

08:29 AM Jul 23, 2020 | mahesh |

ಮಂಗಳೂರು: ಸಾಧಿಸುವ ಛಲವಿದ್ದರೆ ನ್ಯೂನತೆಗಳು ಅಡ್ಡಿಯಾಗಲಾರವು ಎಂಬುದಕ್ಕೆ ಉದಾಹರಣೆ ಈ ಬಾಲಕ. ಈತನ ಹೆಸರು ಅನುಶ್‌ ನಾೖಕ್‌. ಹುಟ್ಟುವಾಗಲೇ ಮಾತು ಬಾರದು, ಕಿವಿ ಕೇಳಿಸದು. ನಿಟ್ಟೆ ಶಂಕರ ಅಡ್ಯಂತಾಯ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ. ಅಂತಿಮ ಪರೀಕ್ಷೆಯಲ್ಲಿ ಶೇ. 73 ಅಂಕ ಗಳಿಸಿರುವುದು ಈತನ ಸಾಧನೆ.

Advertisement

2 ವರ್ಷಗಳ ಹಿಂದೆ ವಾಮಂಜೂರಿನ ಮಂಗಳ ಜ್ಯೋತಿ ವಿಶೇಷ ಶಾಲೆಯಲ್ಲಿ 10ನೇ ತರಗತಿಯನ್ನು ಶೇ. 63 ಅಂಕಗಳೊಂದಿಗೆ ಪೂರೈಸಿದ್ದ ಅನುಶ್‌ ನಂತೂರಿನ ನಿಟ್ಟೆ ಶಂಕರ ಅಡ್ಯಂತಾಯ ಕಾಲೇಜಿಗೆ ಪಿಯುಸಿ ಶಿಕ್ಷಣಕ್ಕೆ ಬಂದಿದ್ದರು. ಆಡಳಿತ ಮಂಡಳಿ ಮೊದಲಿಗೆ ದಾಖಲಿಸಿಕೊಳ್ಳಲು ಹಿಂಜರಿದರೂ ಆತನ ಮುಖದಲ್ಲಿನ ಅದಮ್ಯ ಉತ್ಸಾಹ ಕಂಡು ಪ್ರವೇಶ ನೀಡಿತ್ತು. ವಾಣಿಜ್ಯ ವಿಭಾಗ ಆರಿಸಿಕೊಂಡ ಅನುಶ್‌ ಆಸಕ್ತಿಯಿಂದ ಅಧ್ಯಯನ ಮಾಡಿದರು. ದ್ವಿತೀಯ ಪಿಯುಸಿಯಲ್ಲಿ ಶೇ. 73 ಅಂಕ ಗಳಿಸಿದ್ದಲ್ಲದೇ ವಾಣಿಜ್ಯ ವಿಷಯಗಳಲ್ಲಿ ಶೇ. 80 ಅಂಕ ಪಡೆದು ಸೈ ಎನಿಸಿಕೊಂಡಿದ್ದಾರೆ. ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿರುವ ಅನುಶ್‌ ದೃಶ್ಯಕಲೆ, ಕ್ಲೇ ಪೈಂಟಿಂಗ್‌, ವಾಲಿಬಾಲ್‌ ಹಾಗೂ ಓಟದಲ್ಲೂ ಮುಂದು. ವಾಲಿಬಾಲ್‌ ಮತ್ತು ಜಾವೆಲಿನ್‌ ತ್ರೋದಲ್ಲಿ ವಿಶೇಷ ಮಕ್ಕಳ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.

ಮುಖಚರ್ಯೆ ಗಮನಿಸಿ ಕಲಿಕೆ
ಅನುಶ್‌ನಲ್ಲಿದ್ದ ಲವಲವಿಕೆ, ಕಲಿಕೆಯ ತುಡಿತ ನಮ್ಮ ದುಡಿಮೆಯನ್ನು ಸಾರ್ಥಕಗೊಳಿಸಿದೆ. ಅಧ್ಯಾಪಕರ ಮುಖಚರ್ಯೆ, ನಾಲಗೆಯ ಚಲನೆ, ಹಾವಭಾವ, ಕೈ ಭಾಷೆಗಳಿಂದಲೇ ವಿಷಯವನ್ನು ಸಂಪೂರ್ಣ ಗ್ರಹಿಸುವ ಶಕ್ತಿ, ಜಾಣ್ಮೆ ಆತನಲ್ಲಿದೆ. ವಿಶೇಷವಾದ ಗ್ರಹಣ ಶಕ್ತಿ ಆತನದು ಎನ್ನುತ್ತಾರೆ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಶಕುಂತಳಾ ಶೆಟ್ಟಿ. ಸಂಕಷ್ಟದಲ್ಲಿ ಕುಟುಂಬ ಆತನ ಅಣ್ಣನೂ ಅಂಗವೈಕಲ್ಯ ಹೊಂದಿದ್ದಾರೆ. ಕೋವಿಡ್ ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡ ತಂದೆ ರಾಮಕೃಷ್ಣ ನಾೖಕ್‌ ಜೀವನದಲ್ಲಿ ಜುಗುಪ್ಸೆಗೊಂಡು ಇತ್ತೀಚೆಗೆ ಆತ್ಮಹತ್ಯೆಗೆ ಶರಣರಾಗಿದ್ದಾರೆ. ತಾಯಿ ಯಶವಂತಿ ಗೃಹಿಣಿ. ಆದಾಯದ ಮೂಲವೇ ಇಲ್ಲದ ಕುಟುಂಬ ತೀರಾ ಸಂಕಷ್ಟದಲ್ಲಿದ್ದು, ಅನುಶ್‌ನ ಮುಂದಿನ ಶಿಕ್ಷಣ ಆತಂಕಿತವಾಗಿದೆ.
ಸಂಪರ್ಕ ಸಂಖ್ಯೆ: 9740437617

Advertisement

Udayavani is now on Telegram. Click here to join our channel and stay updated with the latest news.

Next