Advertisement

ಹೊರಗಿನವರಿಂದ ಜೆಎನ್‌ಯು ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಬರಹ : ವಿವಿಯ ಉಪಕುಲಪತಿ

10:34 PM Dec 12, 2022 | Team Udayavani |

ನವದೆಹಲಿ : ”ಕೆಲವು ಹೊರಗಿನವರು ದುರುದ್ದೇಶದಿಂದ ಜೆಎನ್‌ಯು ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಘೋಷಣೆಗಳನ್ನು ಬರೆದರು.ಇಂತಹ ಜಾತಿವಾದಿ ಘೋಷಣೆಗಳನ್ನು ಬಳಸಿರುವುದು ಇದೇ ಮೊದಲು” ಎಂದು ಜೆಎನ್‌ಯು ವಿವಿಯ ಉಪಕುಲಪತಿ ಎಸ್‌. ಡಿ. ಪಂಡಿತ್ ಸೋಮವಾರ ಹೇಳಿಕೆ ನೀಡಿದ್ದಾರೆ.

Advertisement

”ಜೆಎನ್‌ಯು ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಆಚರಿಸಲು ಹೆಸರುವಾಸಿಯಾಗಿದೆ. ಹೆಚ್ಚಿನ ಸೇನೆ, ನೌಕಾಪಡೆ, ವಾಯುಪಡೆ ಸಿಬಂದಿ ಜೆಎನ್‌ಯುನಿಂದ ಬಂದವರು. ಹಾಗಾಗಿ ಜೆಎನ್‌ಯು ದೇಶ ವಿರೋಧಿಯಾಗಲು ಸಾಧ್ಯವಿಲ್ಲ;;ಎಂದು ಹೇಳಿದ್ದಾರೆ.

2-3ಮಂದಿ ಹೊರಗಿನವರು ಬಂದು ಇದನ್ನು ಬರೆದಿದ್ದಾರೆ. ಜೆಎನ್‌ಯುನಲ್ಲಿ ಏನೇ ನಡೆದರೂ ಅದು ಪ್ರಚಾರವಾಗುತ್ತದೆ ಎಂದು ಗೊತ್ತಿದ್ದೂ ದುರುದ್ದೇಶದಿಂದ ಬಂದವರು ಅವರು ಎಂದು ಕಿಡಿ ಕಾರಿದ್ದಾರೆ.

ಇದು ವಿಶ್ವವಿದ್ಯಾನಿಲಯ ಚುನಾವಣೆ ಮತ್ತು ಅಸೆಂಬ್ಲಿ ಚುನಾವಣೆಗೂ ಮುನ್ನ ಸೃಷ್ಟಿಸಿದ ಕಿಡಿಗೇಡಿತನ ಎಂದು ಎಸ್‌ಡಿ ಪಂಡಿತ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next