Advertisement

ಬೆಂಗಳೂರಿನಲ್ಲಿ ರಸ್ತೆ ಹೊಂಡಕ್ಕೆ ಮತ್ತೊಂದು ಬಲಿ

02:58 PM Oct 08, 2017 | Team Udayavani |

ಬೆಂಗಳೂರು: ನಗರದ ರಸ್ತೆಯಲ್ಲಿನ ಗುಂಡಿ ಇನ್ನೊಂದು ಬಲಿ ಪಡೆದಿದ್ದು, ಭಾನುವಾರ ನಾಯಂಡನಹಳ್ಳಿ ಸಿಗ್ನಲ್‌ ಬಳಿ ಹಿಂಬದಿ ಬೈಕ್‌ ಸವಾರೆಯೊಬ್ಬರು ಲಾರಿ ಹರಿದು ದಾರುಣವಾಗಿ ಸಾವನ್ನಪ್ಪಿದ್ದಾರೆ. 

Advertisement

52 ವರ್ಷದ ರಾಧಾ ಎಂಬ ಮಹಿಳೆ ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಅಳಿಯನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಹೊಂಡ ದಲ್ಲಿದ್ದ ಜಲ್ಲಿಯಿಂದಾಗಿ ಬೈಕ್‌ ಸ್ಕಿಡ್‌ ಆಗಿದ್ದು ಈ ವೇಳೆ ಹಿಂಬದಿಯಲ್ಲಿದ್ದ ಲಾರಿ ರಾಧಾರ ಮೈಮೇಲೆ ಹರಿದಿದೆ. 

ಅಳಿಯ ಎಡಬದಿಗೆ ಬಿದ್ದ ಪರಿಣಾಮವಾಗಿ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next