Advertisement

ಭಾರತಕ್ಕೆ ಬರಬೇಕಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

11:20 PM Aug 15, 2022 | Team Udayavani |

ಹೊಸದಿಲ್ಲಿ: ಶಾರ್ಜಾದಿಂದ ಹೈದರಾಬಾದ್‌ಗೆ ಹೊರಟಿದ್ದ ಇಂಡಿಗೋ ವಿಮಾನವು ಪಾಕಿಸ್ಥಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಸೋಮವಾರ ನಡೆದಿದೆ.

Advertisement

ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದೇ ಇದಕ್ಕೆ ಕಾರಣ. ಕಳೆದ 2 ವಾರಗಳಲ್ಲಿ ಈ ರೀತಿ ಪಾಕಿಸ್ಥಾನದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್‌ ಮಾಡಿದ ಭಾರತದ ಎರಡನೇ ವಿಮಾನವಿದು.

ಶಾರ್ಜಾದಿಂದ ಹೊರಟಿದ್ದ ವಿಮಾನದಲ್ಲಿ ಏಕಾಏಕಿ ತಾಂತ್ರಿಕ ದೋಷವಿರುವುದು ಪೈಲಟ್‌ನ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆ ಯಲ್ಲಿ ಕೂಡಲೇ ವಿಮಾನವನ್ನು ಪಾಕಿಸ್ಥಾನದ ಕರಾಚಿಯತ್ತ ತಿರುಗಿಸಲಾಯಿತು. ಅಲ್ಲಿನ ಅಧಿಕಾರಿಗಳ ಅನುಮತಿ ಪಡೆದು ವಿಮಾನ ವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು. ಜತೆಗೆ, ಪ್ರಯಾಣಿಕರನ್ನು ಭಾರತಕ್ಕೆ ಕರೆತರುವ ಸಲುವಾಗಿ ಬೇರೊಂದು ಹೆಚ್ಚುವರಿ ವಿಮಾನ ವನ್ನು ಕರಾಚಿಗೆ ಕಳುಹಿಸಲಾಗಿದೆ ಎಂದು ಇಂಡಿಗೋ ಏರ್‌ಲೈನ್ಸ್‌ ತಿಳಿಸಿದೆ.

ಜುಲೈ 5ರಂದು ಸ್ಪೈಸ್‌ಜೆಟ್‌ನ ದಿಲ್ಲಿ- ದುಬಾೖ ವಿಮಾನದ ಇಂಧನ ಸೂಚಕದಲ್ಲಿ ಲೋಪ ಕಂಡುಬಂದ ಕಾರಣ, ವಿಮಾನವನ್ನು ಪಾಕಿಸ್ಥಾನದ ಕರಾಚಿಯಲ್ಲಿ ಭೂಸ್ಪರ್ಶ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next