Advertisement

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

01:27 AM Apr 20, 2024 | Team Udayavani |

ಭೋಪಾಲ್‌: ಆತಂಕವಾದವನ್ನು ಸೃಷ್ಟಿಸುತ್ತಿದ್ದ ರಾಷ್ಟ್ರ ಈಗ ಗೋಧಿ ಹಿಟ್ಟಿಗೂ (ಆಟಾ) ಪರದಾಡುವಂತಾಗಿದೆ ಎಂದು ನೆರೆ ರಾಷ್ಟ್ರ ಪಾಕಿಸ್ಥಾನವನ್ನು ಉಲ್ಲೇಖೀಸದೆಯೇ ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

Advertisement

ಮಧ್ಯಪ್ರದೇಶದ ದಾಮೋಹ್‌ನಲ್ಲಿ ನಡೆದ ಚುನಾವಣೆ ರ್ಯಾಲಿಯಲ್ಲಿ ಜನರ ನ್ನುದ್ದೇಶಿಸಿ ಪ್ರಧಾನಿ ಮಾತನಾಡಿದ್ದಾರೆ. 10 ವರ್ಷದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಅಚಲವಾಗಿ ನಿಂತು ಎಲ್ಲ ಸಮಸ್ಯೆಗಳನ್ನೂ ಪರಿಹರಿಸುವಲ್ಲಿ ಯಶಸ್ವಿಯಾಗಿದೆ ಎಂದು ಪ್ರತಿಪಾದಿಸಿದ್ದಾರೆ. ನಮ್ಮ ಸರಕಾರ 10 ವರ್ಷದಿಂದಲೂ ಜನರ ಹಿತಾಸಕ್ತಿಯನ್ನೇ ಆಧಾರವಾಗಿಸಿ ಕಾರ್ಯ ನಿರ್ವಹಿಸಿದೆ ಎಂದಿದ್ದಾರೆ.

ವಿಶ್ವದ ಹಲವು ರಾಷ್ಟ್ರಗಳ ಸ್ಥಿತಿ ಹದೆಗಟ್ಟಿದೆ. ಕೆಲವು ಯುದ್ಧಪೀಡಿತ ವಾದರೆ, ಕೆಲವು ರಾಷ್ಟ್ರಗಳು ಆರ್ಥಿಕವಾಗಿ ದಿವಾಳಿಯಾಗಿವೆ. ಅದರಲ್ಲೂ ಭಯೋ ತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ ರಾಷ್ಟ್ರ ವೊಂದು ಗೋಧಿ ಹಿಟ್ಟಿಗೂ ಪರದಾಡು ತ್ತಿದೆ ಆದರೆ ಭಾರತ ಅಚಲವಾಗಿದೆ ಎಂದಿದ್ದಾರೆ. ಜತೆಗೆ ಉ.ಪ್ರ.ದ ಅನ್ರೋ ಹ್‌ನಲ್ಲಿ ಮಾತನಾಡಿ ಹಿಂದಿನ‌ ಸರಕಾರಗಳು ಎಸ್ಸಿ, ಎಸ್ಟಿ, ಒಬಿಸಿ ಸಮು ದಾಯಗಳನ್ನು ಸಾಮಾಜಿಕ ನ್ಯಾಯದ ಹೆಸರಲ್ಲಿ ವಂಚಿಸಿದ್ದು, ನಾವು ಅದನ್ನು ಸರಿಪಡಿಸುತ್ತಿದ್ದೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next