Advertisement

ಅಣ್ಣಯ್ಯ ಗೌಡ ಕೊಲೆ: ಪತ್ನಿ  ಸಹಿತ ಇಬ್ಬರಿಗೆ ಜೀವಾವಧಿ 

06:00 AM May 10, 2018 | |

ಮಂಗಳೂರು: ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಶಾಲೆ ಮನೆಯ ಅಣ್ಣಯ್ಯ ಗೌಡ ಅವರನ್ನು  ಕೊಲೆ ಮಾಡಿದ  ಅರಣ್ಯ ಇಲಾಖೆಯ ಉದ್ಯೋಗಿ ಬೆಳ್ತಂಗಡಿ ತಾಲೂಕು ಕಳೆಂಜ ಶಾಖೆಯಲ್ಲಿ ಫಾರೆಸ್ಟರ್‌ ಆಗಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಸಿದ್ಧಾಪುರ ಥಾಂಡಾ ನಿವಾಸಿ ಟಿ.ರುದ್ರೇಶ (32) ಮತ್ತು ಅಣ್ಣಯ್ಯ ಗೌಡರ ಪತ್ನಿ ಅಮಿತಾ ಯಾನೆ ದೇವಕಿ (42) ಅವರಿಗೆ  ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ 1 ನೇ ಹೆಚ್ಚುವರಿ ಜಿಲ್ಲಾ  ಮತ್ತು ಸೆಷನ್ಸ್‌  ನ್ಯಾಯಾಲಯ ತೀರ್ಪು ನೀಡಿದೆ. 

Advertisement

2014 ಎ. 19ರಂದು ರಾತ್ರಿ 11 ಗಂಟೆಗೆ ಅಣ್ಣಯ್ಯ ಗೌಡರನ್ನು  ಅವರ ಮನೆಯಲ್ಲೇ ಹೊಡೆದು ಕೊಲೆ ಮಾಡಲಾಗಿತ್ತು.  ಅಮಿತಾ  ಮತ್ತು  ರುದ್ರೇಶ ನಡುವಿನ ಅನೈತಿಕ ಸಂಬಂಧ  ಕೊಲೆಗೆ ಕಾರಣ ಎಂದು ಆರೋಪಿಸ ಲಾಗಿತ್ತು.  ವಿಚಾರಣೆ  ನಡೆಸಿದ ನ್ಯಾಯಾಧೀಶೆ ಶಾರದಾ ಬಿ. ಅವರು ಮೇ 4ರಂದು ಆರೋಪ ಸಾಬೀತಾಗಿದೆ ಎಂದು ಆರೋಪಿಗಳನ್ನು ಅಪರಾಧಿಗಳು ಎಂಬುದಾಗಿ ಘೋಷಿಸಿದ್ದರು.  ಸರಕಾರದ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ರಾಜು ಪೂಜಾರಿ ಬನ್ನಾಡಿ  ವಾದಿಸಿದ್ದರು.

ನ್ಯಾಯಾಂಗ ಬಂಧನದಲ್ಲಿ ಕಳೆ ದಿರುವ ಅವಧಿಯನ್ನು ಶಿಕ್ಷೆ ಪ್ರಮಾಣ ದಿಂದ ಕಡಿತ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇಬ್ಬರು ಅಪರಾಧಿಗಳ ಒಟ್ಟು ದಂಡ ಮೊತ್ತ 2,50,000 ರೂ.ಯಲ್ಲಿ  60 ಸಾ. ರೂ. ಅನ್ನು  ಅಣ್ಣಯ್ಯ ಗೌಡ ಅವರ ಮೂವರು (ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರ) ಮಕ್ಕಳಿಗೆ ಪರಿಹಾರವಾಗಿ ನೀಡ ಬೇಕು.  ಅಲ್ಲದೆ ಜಿಲ್ಲಾಧಿಕಾರಿ  ಕೂಡ   ಮಕ್ಕಳಿಗೆ ಸೂಕ್ತ ಪರಿಹಾರ ನೀಡಲು  ನ್ಯಾಯಾಧೀಶರು ಆದೇಶಿಸಿದ್ದಾರೆ. 

ಶಿಕ್ಷೆಯ ವಿವರ
ಕೊಲೆ ಕೃತ್ಯ (ಐಪಿಸಿ ಸೆ. 302)ಕ್ಕೆ  ಜೀವಾವಧಿ ಶಿಕ್ಷೆ  ಮತ್ತು ತಲಾ 50 ಸಾ. ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 1 ವರ್ಷ ಸಜೆ, ಕೊಲೆಗೆ ಒಳಸಂಚು (ಐಪಿಸಿ ಸೆಕ್ಷನ್‌ 120ಎ) ರೂಪಿಸಿದ್ದಕ್ಕೆ ಜೀವಾವಧಿ ಸಜೆ ಮತ್ತು ತಲಾ 50 ಸಾ.ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಹೆಚ್ಚುವರಿಯಾಗಿ 1 ವರ್ಷ ಶಿಕ್ಷೆ, ಸಾಕ್ಷ್ಯ ನಾಶ (ಐಪಿಸಿ ಸೆ. 201)ಕ್ಕೆ  2 ವರ್ಷ ಸಾಮಾನ್ಯ ಶಿಕ್ಷೆ ಮತ್ತು ತಲಾ 15 ಸಾ. ರೂ.ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 6 ತಿಂಗಳ ಸಜೆ, ಕೃತ್ಯದ ಬಗ್ಗೆ ತಪ್ಪು ಮಾಹಿತಿ ನೀಡಿರುವುದಕ್ಕೆ(ಐಪಿಸಿ ಸೆ. 203) 1 ವರ್ಷ ಸಾಮಾನ್ಯ ಸಜೆ ಮತ್ತು ತಲಾ 10 ಸಾ. ರೂ. ದಂಡ. ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 3 ತಿಂಗಳ ಜೈಲು ಶಿಕ್ಷೆ  ಅನುಭವಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next