Advertisement

ಉಚಿತ ಬಸ್ ಯೋಜನೆ; 40 ದಿನದಲ್ಲಿ ಅಂಜನಾದ್ರಿ ಹುಂಡಿಗೆ ಬಿತ್ತು 26.57 ಲಕ್ಷ ರೂ.!

06:35 PM Jul 04, 2023 | Team Udayavani |

ಗಂಗಾವತಿ: ರಾಜ್ಯ ಸರಕಾರದ ಶಕ್ತಿಯೋಜನೆಯಿಂದಾಗಿ ಮಹಿಳೆಯರಿಗೆ ಉಚಿತ ಪ್ರಯಾಣದ ಪರಿಣಾಮ ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂಧಾ ಅಂಜನಾದ್ರಿ ಶ್ರೀ ಆಂಜನೇಯ ದೇವಸ್ಥಾನ ಹುಂಡಿಯಲ್ಲಿ 40 ದಿನಗಳಲ್ಲಿ ಒಟ್ಟು 26.57 ಲಕ್ಷ ರೂ.ಗಳ ದಾಖಲೆ ಸಂಗ್ರಹವಾಗಿದೆ.

Advertisement

ಹುಂಡಿಯ ಎಣಿಕೆಯನ್ನು ಮಂಗಳವಾರ ಮಾಡಲಾಗಿದ್ದು ಒಟ್ಟು 26.57 ಲಕ್ಷ ರೂ.ಗಳ ಸಂಗ್ರಹವಾಗಿದೆ. ಇದರಲ್ಲಿ ದುಬೈ,ಮಲೇಶಿಯಾ ಹಾಗೂ ಅಮೇರಿಕಾದ 3 ವಿದೇಶಿ ನಾಣ್ಯಗಳಿವೆ. ಕಳೆದ ಮೇ 25 ರಂದು ಹುಂಡಿ ಎಣಿಕೆ ನಡೆಸಿದಾಗ 28.80 ಲಕ್ಷ ರೂ.ಗಳು ಸಂಗ್ರಹವಾಗಿದ್ದವು. ಶಕ್ತಿ ಯೋಜನೆ ಅನುಷ್ಠಾನದ ಪರಿಣಾಮ ಅಂಜನಾದ್ರಿಗೆ ಹೆಚ್ಚಾಗಿ ಮಹಿಳಾ ಭಕ್ತರು ಆಗಮಿಸಿ ಶ್ರೀಆಂಜನೇಯಸ್ವಾಮಿಗೆ ಕಾಣಿಕೆ ಹಾಕಿದ್ದರಿಂದ 40 ದಿನಗಳಲ್ಲಿ ಹುಂಡಿಯಲ್ಲಿ 26.57 ಲಕ್ಷ ರೂ.ಸಂಗ್ರಹವಾಗಿದೆ.

ಹುಂಡಿ ಎಣಿಕೆ ಕಾರ್ಯದಲ್ಲಿ ತಹಸೀಲ್ದಾರ್ ಮಂಜುನಾಥ ಸ್ವಾಮಿ, ಶಿರಸ್ತೇದಾರಾದ ಆನಂತ ಜೋಶಿ, ರವಿಕುಮಾರ ನಾಯಕವಾಡಿ, ಮೈಬೂಬಅಲಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ ಮಹೇಶ್ ದಲಾಲ, ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಗುರುರಾಜ, ಶ್ರೀಕಂಠ, ಇಂದಿರಾ, ಅನ್ನಪೂರ್ಣ, ಮಹ್ಮದ್ ರಫೀಕ್, ಗಾಯತ್ರಿ,ಸೌಭಾಗ್ಯ,ಸುಧಾ, ಸೈಯದ್ ಮುರ್ತುಜಾ, ಶ್ರೀರಾಮ,ಕವಿತಾ ಎಸ್,ಕವಿತಾ ಸಾಣಾಪೂರ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿಗಳಾದ ರಾಜಶೇಖರ ಸುನಿಲ್ , ಪೋಲಿಸ್ ಸಿಬ್ಬಂದಿ ಪ್ರಕಾಶ ನಾಯಕ್ ಪ್ರವಾಸಿ ಮಿತ್ರ ಸಿಬ್ಬಂದಿಗಳು ಹಾಗೂ ವೆಂಕಟೇಶ ದೇವಸ್ಥಾನದ ಸಿಬ್ಬಂದಿವರ್ಗ ಹಾಗೂ ಭಕ್ತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next