Advertisement

ಮುಖ್ಯಮಂತ್ರಿ ಕಚೇರಿ ಹೆಸರಲ್ಲಿ ನಕಲಿ ಕರೆ ಮಾಡಿದ ಅಧಿಕಾರಿ

11:05 PM Nov 08, 2019 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಶಾಸಕರ ನಕಲಿ ಲೆಟರ್‌ ಹೆಡ್‌ಗಳ ಮೂಲಕ ವರ್ಗಾವಣೆ ಹಾಗೂ ಅನುದಾನ ಬಿಡುಗಡೆ ಮಾಡಿಕೊಳ್ಳುತ್ತಿರುವವರ ಸಾಲಿಗೆ ಈಗ ನಕಲಿ ದೂರವಾಣಿ ಕರೆ ಮಾಡಿ ಅಧಿಕಾರಿ ಸಿಲುಕಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಕೆಪಿಟಿಸಿಎಲ್‌ ಉದ್ಯೋಗಿ ಬಿ.ಎಲ್‌.ನರಸಿಂಹ ಮೂರ್ತಿ ಎನ್ನುವವರು, ತಮ್ಮ ವರ್ಗಾವಣೆಯನ್ನು ಮಾರ್ಪಡಿಸಲು ಮುಖ್ಯಮಂತ್ರಿ ಕಚೇರಿಯಿಂದ ಕರೆ ಮಾಡಿರುವುದಾಗಿ ಸುಳ್ಳು ಹೇಳಿದ್ದಾರೆ. ಬೆಸ್ಕಾಂನ ಕೆಂಗೇರಿಯ ಕಾರ್ಯಪಾಲನಾ ವಿಭಾಗದಲ್ಲಿ ಮುಂದುವರಿಯಲು ಸುಳ್ಳು ಕರೆ ಮಾಡಿ ಆದೇಶ ಮಾರ್ಪಾಡು ಮಾಡಿಸಿಕೊಂಡಿದ್ದಾರೆ.

ಅವರು ಆದೇಶ ಮಾರ್ಪಡಿಸಿಕೊಳ್ಳಲು ಮುಖ್ಯಮಂತ್ರಿಯವರ ಕಚೇರಿ ಹೆಸರು ಬಳಸಿಕೊಂಡು ಸುಳ್ಳು ಹೇಳಿರುವುದು ನಿಗಮದ ಗಮನಕ್ಕೆ ಬಂದಿರುವುದರಿಂದ ಅವರ ವರ್ಗಾವಣೆ ಆದೇಶವನ್ನು ಮಾರ್ಪಡಿಸಿ, ಕೆಪಿಟಿಸಿಎಲ್‌ ಕಾರ್ಯಾಲಯದಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next