Advertisement

ಕವಿವಿಯಲ್ಲಿ ಅಮರ ಜವಾನ್‌ ಸ್ತೂಪಕ್ಕೆ ಗೌರವಾರ್ಪಣೆ

02:51 PM Jan 27, 2021 | Team Udayavani |

ಧಾರವಾಡ: ಕವಿವಿಯಲ್ಲಿ 72ನೇ ಗಣರಾಜ್ಯೋತ್ಸವದ ಅಂಗವಾಗಿ ಅಮರ ಜವಾನ್‌ ಸ್ತೂಪಕ್ಕೆ ಮಾಲಾರ್ಪಣೆ ಮಾಡಿದ ಕುಲಪತಿ ಪ್ರೊ|ಕೆ.ಬಿ.ಗುಡಸಿ ಅವರು ಹಸಿರು ವಿದ್ಯಾರ್ಜನೆ ಉದ್ಯಾನದಲ್ಲಿ ಧ್ವಜಾರೋಹಣ ನೆರವೇರಿಸಿದರು.

Advertisement

ಕುಲಸಚಿವ ಡಾ|ಹನುಮಂತಪ್ಪ ಕೆ.ಟಿ, ಮೌಲ್ಯಮಾಪನ ಕುಲಸಚಿವ ಡಾ|ರವೀಂದ್ರ ಕದಂ, ಹಣಕಾಸು ಅಧಿ ಕಾರಿ, ಡಾ|ಆರ್‌. ಆರ್‌. ಬಿರಾದರ ಸೇರಿದಂತೆ ಹಲವರು ಇದ್ದರು. ಇನ್ನೂ ಧಾರವಾಡಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜರುಗಿದ 72ನೇ ಗಣರಾಜ್ಯೋತ್ಸವದಲ್ಲಿ ಕೇಂದ್ರದ ನಿರ್ದೇಶಕ ಡಾ| ವೀರಣ್ಣ ಬೋಳಿಶೆಟ್ಟಿ ಧ್ವಜಾರೋಹಣ ನೆರವೇರಿಸಿದರು.

ಕೃಷಿ ವಿವಿ: ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಕುಲಪತಿ ಡಾ|ಮಹಾದೇವ ಚೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಕೃಷಿ ವಿವಿಯ ಗೀತೆಯನ್ನು ಚಿತ್ರೀಕರಿಸಿ ಹಾಗೂ ಸಂಗೀತ ಸಂಯೋಜಿಸಿ ನಿರ್ದೇಶಿಸಿದ ಸುರೇಶ ಹೆಬ್ಳಿಕರ ಹಾಗೂ ಚೆನ್ನಪ್ಪಾ ಅಂಗಡಿ ರಚಿಸಿದ ಗೀತೆಯನ್ನು ಪ್ರಥಮ ಕುಲಪತಿ ಡಾ| ಜೆ.ವಿ. ಗೌಡರು ಬಿಡುಗಡೆ ಮಾಡಿದರು.

ಇದನ್ನೂ ಓದಿ:ಗಣರಾಜ್ಯೋತ್ಸವಕ್ಕೆ ಹೊಸ ಪೋಸ್ಟರ್‌ ಮೂಲಕ ರಾಬರ್ಟ್‌ ವಿಶ್‌

ಆಯುಕ್ತರ ಕಚೇರಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತರ ಕಚೇರಿ ಆವರಣದಲ್ಲಿ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಅವರು ಧ್ವಜಾರೋಹಣ ನೆರವೇರಿಸಿದರು. ಮಮತಾ ನಾಯಕ, ಮೃತ್ಯುಂಜಯ ಕುಂದಗೋಳ, ಉಪನಿರ್ದೇಶಕ ಆರ್‌.ಎಸ್‌. ಮುಳ್ಳೂರ ಮೊದಲಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next