Advertisement

ನಿರ್ಮಾಣ ಹಂತದ ರಾ.ಹೆ. ಮಧ್ಯದಲ್ಲಿ ವಿದ್ಯುತ್‌ ಕಂಬ! : ಅಪಾಯಕ್ಕೆ ಆಹ್ವಾನ

10:50 AM Feb 22, 2023 | Team Udayavani |

ಗಂಜಿಮಠ: ಮಂಗಳೂರು- ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಅಭಿವೃದ್ಧಿ ಕಾಮಗಾರಿ ಗಂಜಿಮಠ ಭಾಗದಲ್ಲಿ ಭರದಿಂದ ಸಾಗಿದ್ದು, ಇಲ್ಲಿನ ಸುರಲ್ಪಾಡಿಯಲ್ಲಿ ವಿದ್ಯುತ್‌ ಕಂಬವನ್ನು ರಸ್ತೆ ಮಧ್ಯದಲ್ಲಿ ಹಾಗೇ ಬಿಟ್ಟು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇದು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಶೀಘ್ರ ಕಂಬ ತೆರವು ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ಹಳೆಯ ರಸ್ತೆಯ ಪಕ್ಕದಲ್ಲೇ ನೆಲ ಸಮತಟ್ಟು ಮಾಡಿ ಡಾಮರು ಹಾಕಿ ದ್ವಿಪಥ ರಸ್ತೆಯ ಒಂದು ಕಡೆಯ ರಸ್ತೆನ್ನು ನಿರ್ಮಿಸಲಾಗಿದೆ. ಈ ವೇಳೆ ಹಳೆಯ ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್‌ ಕಂಬವನ್ನು ತೆರವುಗೊಳಿಸದೆ ಹಾಗೇ ಬಿಡಲಾಗಿದೆ. ಪ್ರಸ್ತುತ ವಿದ್ಯುತ್‌ ಕಂಬ ಹೊಸ ರಸ್ತೆಯ ಮಧ್ಯದಲ್ಲಿದ್ದು, ಅಪಾಯಕಾರಿಯಾಗಿದೆ.

Advertisement

ಕಾಮಗಾರಿ ನಿರ್ವಹಿಸುತ್ತಿರುವ ಸಂಸ್ಥೆಯವರು ಕೇವಲ ಒಂದು ಬ್ಯಾರಲ್‌ ಇರಿಸಿ ವಾಹನ ಸವಾರರಿಗೆ ಎಚ್ಚರಿಕೆ ಸೂಚನೆ ನೀಡಿದ್ದಾರೆ. ಆದರೆ ಇದರಿಂದ ಸಂಭಾವ್ಯ ಅಪಾಯ ತಡೆಯಲು ಸಾಧ್ಯವಿಲ್ಲ. ರಾತ್ರಿ ವೇಳೆಯಂತೂ ಇದರಿಂದ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆಯಿದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ. ರಸ್ತೆ ಕಾಮಗಾರಿ ಕೈಗೊಳ್ಳುವಾಗ ವಾಹನಗಳ, ಪಾದಚಾರಿಗಳ ಸುರಕ್ಷೆಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next