Advertisement

ಅಮೃತಾಯುರ್ವೇದ ಆರೋಗ್ಯ ಕಾರ್ಡ್‌ ಬಿಡುಗಡೆ

02:12 PM Jul 05, 2018 | Team Udayavani |

ಕುಂದಾಪುರ: ಕುಂದಾಪುರ ಶಾಸ್ತ್ರೀ ವೃತ್ತ ಬಳಿಯ ಅಮೃತೇಶ್ವರಿ ಆಸ್ಪತ್ರೆಯ ಸಭಾಂಗಣದಲ್ಲಿ ಅಮೃತೇಶ್ವರಿ ಎಜುಕೇಶನಲ್‌ ಟ್ರಸ್ಟ್‌ನ ಅಮೃತಾ ಯುರ್ವೇದ ಆರೋಗ್ಯ ಕಾರ್ಡ್‌ನ್ನು ಕೋಟ ಅಮೃತೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಅಮೃತೇಶ್ವರಿ ಎಜುಕೇಶನಲ್‌ ಟ್ರಸ್ಟ್‌ನ ನಿರ್ದೇಶಕ ಆನಂದ ಸಿ. ಕುಂದರ್‌ ಅವರು ಜೂ.28 ರಂದು ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು.

Advertisement

ಅನಂತರ ಮಾತನಾಡಿದ ಅವರು ರೋಗದ ನಿರ್ಭಂದನೆ ಆರೋಗ್ಯ ವರ್ಧನೆ ಎಂಬ ಧ್ಯೇಯದೊಂದಿಗೆ ಮಾನವ ಕುಲದ ಸೇವೆ ಈ ಆರೋಗ್ಯ ಕಾರ್ಡಿನ ಮೂಲಕ ಸಮಾಜದ ಎಲ್ಲಾ ಸಾಮಾನ್ಯ ಜನರಿಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭಿಸಲಿ ಎಂದು ಹಾರೈಸಿದರು. 

ಸಂಸ್ಥೆಯ ನಿರ್ದೇಶಕರಾದ ಡಾ| ಶಿವಕುಮಾರ್‌, ಡಾ| ಜಗದೀಶ್‌ ಶೆಟ್ಟಿ, ಚಂದ್ರಕಾಂತ ಶೆಣೈ, ಮೋಹನಕೃಷ್ಣ ಭಟ್‌ ಹಾಗೂ ಆಸ್ಪತ್ರೆಯ ಪ್ರಧಾನ ವೈದ್ಯರಾದ ಡಾ| ಪ್ರಾಣದೇವ್‌ ಉಪಾಧ್ಯಾಯ, ಡಾ| ಗೌತಮ್‌ ಶೆಟ್ಟಿ, ಡಾ| ಶ್ರೀಧರ ವರ್ಣ, ಡಾ| ಸೋನಿ, ಡಾ| ಮಾನಸ, ಡಾ| ಶಿಲ್ಪ, ಡಾ| ಅಶ್ವತಿ, ಡಾ| ಸುಕನ್ಯಾ, ಇಂಜಿನೀಯರ್‌ ಸುರೇಂದ್ರ ಪಣಿಯಾರ್‌ ಮತ್ತು ಸಿಬಂದಿ ಉಪಸ್ಥಿತರಿದ್ದರು. ಟ್ರಸ್ಟ್‌ನ ಪ್ರಧಾನ ನಿರ್ದೇಶಕ ಡಾ| ಶ್ರೀಧರ ರಾವ್‌ ಸ್ವಾಗತಿಸಿ, ನಿರ್ದೇಶಕ ಡಾ| ಕೆ. ಮುರಳೀಕೃಷ್ಣ ಭಟ್‌ ಆರೋಗ್ಯ ಕಾರ್ಡ್‌ ಪ್ರಯೋಜನ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next