Advertisement

ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಭೇಟಿ ನೀಡಿದ ಅಮಿತ್ ಶಾ

04:34 PM Feb 11, 2023 | Team Udayavani |

ಪುತ್ತೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ಈಶ್ವರ ಮಂಗಲದ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಭೇಟಿ ನೀಡಿದರು.

Advertisement

ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಈಶ್ವರಮಂಗಲ ಹೆಲಿಪ್ಯಾಡ್‍ ನಲ್ಲಿ ಇಳಿದರು. ಹನುಮಗಿರಿಯ ಅಮರಗಿರಿ ಲೋಕಾರ್ಪಣೆ ಮಾಡಿದರು.

ಇದನ್ನೂ ಓದಿ:ಚುನಾವಣೆ ಖರ್ಚಿಗೆಂದು ಸಿದ್ದರಾಮಯ್ಯಗೆ ಉಳಿತಾಯದ ಹಣ ನೀಡಿದ ಬಾಲೆ

ಪಂಚಮುಖಿ ಕ್ಷೇತ್ರದಲ್ಲಿ ಅಮಿತ್ ಶಾ ಅವರು ನವರತ್ನ ಖಚಿತ ಗದೆ ಸಮರ್ಪಣೆ ಮಾಡಿದರು. ಕಂಕಣ ಕಟ್ಟಿ, ಪ್ರಸಾದ, ಫಲ ಪುಷ್ಪ, ಶಾಲು ಹೊದೆಸಿ ಅಚ್ಚುತ ಮೂಡಿತ್ತಾಯ ಅವರು ಶಾ ಅವರಿಗೆ ಗೌರವಾರ್ಪಣೆ ಮಾಡಿದರು.

Advertisement

ಅಮರಗಿರಿಗೆ ತೆರಳಿ ಅಲ್ಲಿ ಭಾರತ ಮಾತೆ ಮಂದಿರದಲ್ಲಿ ಸಂವಿಧಾನದ ಪ್ರತಿಯ ಮೇಲೆ ಹಸ್ತಾಕ್ಷರ ಹಾಕಿ ಅದನ್ನು ಕೊಡುಗೆಯಾಗಿ ನೀಡಿದರು.

ಹನುಮಗುರಿಯ ಅಮರಗಿರಿಯಿಂದ 3.40 ಕ್ಕೆ ಪುತ್ತೂರಿಗೆ ಹೊರಟರು. ಅಲ್ಲಿ ಕ್ಯಾಂಪ್ಕೋ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next