Advertisement

ಲಾಲು- ರಾಹುಲ್‌ ಭೇಟಿಗೆ ಶಾ ಕಿಡಿ

06:00 AM May 01, 2018 | Team Udayavani |

ಕೋಲಾರ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರನ್ನು ದಿಲ್ಲಿಯ ಏಮ್ಸ್‌ನಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭೇಟಿ ಮಾಡಿದ್ದು, ಈ ಬಗ್ಗೆ ಅಮಿತ್‌ ಶಾ ಕಿಡಿಕಾರಿದ್ದಾರೆ. 

Advertisement

ಕೆಜಿಎಫ್ನಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ವಿಚಾರ ದಲ್ಲಿ ಕಾಂಗ್ರೆಸ್‌ ಅಧ್ಯಕ್ಷರಿಗೆ ಎರಡು ಮುಖಗಳಿವೆ ಎನ್ನು ವುದು ಲಾಲು ಯಾದವ್‌ರ ಭೇಟಿಯಿಂದ ಸ್ಪಷ್ಟವಾಗಿದೆ. 2013ರಲ್ಲಿ ಅಂದಿನ ಯುಪಿಎ ಸರಕಾರ ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವವರು ಆರೋಪ ಸಾಬೀತು ಆಗುವವರೆಗೂ ಸ್ಥಾನದಲ್ಲಿ ಮುಂದುವರಿಯ ಬಹುದೆಂಬ ಅಧ್ಯಾದೇಶವನ್ನು ವಿರೋಧಿಸಿ ರಾಹುಲ್‌ ಹರಿದು ಹಾಕಿದ್ದರು. ಆದರೆ ಅಂಥವರೇ ಇಂದು ಲಾಲು ಅವರನ್ನು ಆಲಂ ಗಿಸಿಕೊಂಡಿದ್ದಾರೆ ಎಂದರು.

ಮುಂದಿನ ಚುನಾವಣೆಯಲ್ಲಿ ಬಿಹಾರದಲ್ಲಿ ಕಾಂಗ್ರೆಸ್‌ಗೆ ಆರ್‌ಜೆಡಿ ಬೆಂಬಲವಿಲ್ಲದೆ ಏನೂ ಸಾಧಿಸಲು ಸಾಧ್ಯವಿಲ್ಲದ ಸ್ಥಿತಿ ಇದೆ. ಅದಕ್ಕಾಗಿ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಅವರನ್ನು ರಾಹುಲ್‌  ಭೇಟಿಯಾಗಿ ಆಲಂಗಿಸಿಕೊಂಡಿ ದ್ದಾರೆ. ಅವರು ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಒಂದು ನೀತಿ, ಅಧಿಕಾರದಲ್ಲಿ ಇಲ್ಲದೇ ಇರುವಾಗ ಮತ್ತೂಂದು ನೀತಿ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next