Advertisement

ಭಾರತಕ್ಕೆ ಅಂಬೇಡ್ಕರ್‌ ಕೊಡುಗೆ ಅಪಾರ

01:23 PM Apr 17, 2017 | Team Udayavani |

ಹೊನ್ನಾಳಿ: ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ತಮ್ಮ ಪ್ರಾಥಮಿಕ ಶಾಲೆಯ ಜೀವನದಿಂದಲೂ ಕಷ್ಟ ಸಹಿಷ್ಣುವಾಗಿ ಬೆಳೆದು ಸಂವಿಧಾನ ರಚಿಸಿದ ಮಹಾನ್‌ ವ್ಯಕ್ತಿಯಾಗಿದ್ದಾರೆ.

Advertisement

ಭಾರತಕ್ಕೆ ಡಾ| ಬಿ.ಆರ್‌. ಅಂಬೇಡ್ಕರ್‌ ಕೊಡುಗೆ ಅಪಾರ ಎಂದು ಹಿರೇಕಲ್ಮಠದ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ಅಧ್ಯಾಪಕ ಪ್ರೊ| ಮಹಾದೇವ ರುದ್ರಗೌಡ ಪಾಟೀಲ್‌ ಹೇಳಿದರು. 

ಕಾಲೇಜಿನಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ 126ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು. ಪ್ರಾಂಶುಪಾಲ ಜಿ. ಪಂಚಾಕ್ಷರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಧ್ಯಾಪಕರಾದ ಡಾ| ಎಸ್‌. ವರದರಾಜು, ಡಾ| ಪಿ.ಬಿ. ಚಾಮರಾಜು, ಆಡಳಿತಾತ್ಮಕ ಸಿಬ್ಬಂದಿಗಳಾದ ಎನ್‌. ಲೋಕೇಶ, ಡಿ.ಎಂ. ಹಾಲಾರಾಧ್ಯ, ರುದ್ರಪ್ಪ ಬಣಕಾರ, ಎಂ. ಸದಾಶಿವಯ್ಯ, ಎಂ.ಸಿ. ದತ್ತಾತ್ರೇಯ, ಹೇಮಾವತಿ, ಕಾವಲುಗಾರ ದಾನಪ್ಪ ಹಾಗೂ ವಿದ್ಯಾರ್ಥಿಗಳು ಇದ್ದರು. ಎನ್ನೆಸ್ಸೆಸ್‌ ಅಧಿಕಾರಿ ಡಾ| ಎನ್‌. ಕೊಟ್ರೇಶ್‌ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next