Advertisement

ಅಮರನಾಥ ಯಾತ್ರೆಗೆ ತೆರೆ: 2.60 ಲಕ್ಷ ಯಾತ್ರಿಕರ ಭೇಟಿ

07:15 AM Aug 08, 2017 | |

ಶ್ರೀನಗರ: 40 ದಿನಗಳ ವಾರ್ಷಿಕ ಅಮರನಾಥ ಯಾತ್ರೆ ಸೋಮವಾರ ಮುಕ್ತಾಯಗೊಂಡಿತು. ಯಾತ್ರಿಕರಿದ್ದ ಬಸ್ಸಿನ ಮೇಲೆ ನಡೆದ ಉಗ್ರರ ದಾಳಿಯಂಥ ಕರಾಳ ನೆನಪಿನ ನಡುವೆಯೇ ಈ ಬಾರಿ 2.60 ಲಕ್ಷ ಯಾತ್ರಿಕರು ಅಮರನಾಥನ ದರ್ಶನ ಪಡೆದರು. ಹಾಗೆ ನೋಡಿದರೆ 14 ವರ್ಷಗಳಲ್ಲಿ ಇಷ್ಟು ಕಡಿಮೆ ಯಾತ್ರಿಕರು ಪಾಲ್ಗೊಂಡಿರುವುದು ಇದು 2ನೇ ಬಾರಿಗೆ ಎನ್ನಲಾಗಿದೆ. ಈ ಬಾರಿ ಉಗ್ರರ ದಾಳಿಗೆ 8 ಮಂದಿ ಬಲಿಯಾದರೆ, 40 ಇತರ ಯಾತ್ರಿಕರು ಅಸುನೀಗಿದ್ದಾರೆ. ಆ ಪೈಕಿ 16 ಮಂದಿ ಅಪಘಾತದಲ್ಲಿ, ಇನ್ನುಳಿದವರು ಅನಾರೋಗ್ಯ ಕಾರಣ ಸಾವಿಗೀಡಾಗಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next