Advertisement

ಪ್ರಾಣಾಪಾಯವಿದೆ ಎಂದ ಲವ್‌ ಜಿಹಾದ್‌ ಸಂತ್ರಸ್ತೆ

06:25 AM Oct 28, 2017 | Team Udayavani |

ತಿರುವನಂತಪುರಂ: ಲವ್‌ ಜಿಹಾದ್‌ ಹಣೆಪಟ್ಟಿ ಅಂಟಿಕೊಂಡ ಪರಿಣಾಮವಾಗಿ ಕೇರಳ ಹೈಕೋರ್ಟ್‌ ಆದೇಶದ ಮೇರೆಗೆ ತನ್ನ ಪತಿ ಶಫಿನ್‌ ಜಹಾನ್‌ನಿಂದ ಬೇರ್ಪಟ್ಟಿದ್ದ ಕೊಟ್ಟಾಯಂನ 22ರ ಪ್ರಾಯದ ಯುವತಿ ಅಖೀಲ ಅಶೋಕನ್‌ ಅಲಿಯಾಸ್‌ ಹಾದಿಯಾ, ತಾನು ಪ್ರಾಣಾಪಾಯದಲ್ಲಿರುವುದಾಗಿ ಹೇಳಿಕೊಂಡಿದ್ದಾಳೆ. 

Advertisement

ವೀಡಿಯೊ ತುಣುಕೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಆಕೆ, ಲವ್‌ ಜಿಹಾದ್‌ ಹಿನ್ನೆಲೆಯಲ್ಲಿ ತನ್ನ ತಂದೆ ತನ್ನನ್ನು ಹಿಂಸಿಸುತ್ತಿದ್ದಾರೆಂದು ಆರೋಪಿಸಿದ್ದಾಳೆ. ಆಗಸ್ಟ್‌ನಲ್ಲಿ ಈ ವೀಡಿಯೊ ಚಿತ್ರೀಕರಣವಾಗಿರುವುದು ಕುತೂಹಲಕ್ಕೆಡೆ ಮಾಡಿದೆ. ಆದರೆ, ಹಾದಿಯಾ ಆರೋಪಗಳನ್ನು ತಂದೆ ಅಶೋಕನ್‌ ತಳ್ಳಿಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next