Advertisement

ಕಷ್ಟದಲ್ಲಿ ಸಹಾಯ ಮಾಡಿದ್ರೆ ಜನರ ಮನದಲ್ಲಿ ಸದಾ ಸ್ಮರಣೆ

10:41 PM Jul 15, 2021 | Team Udayavani |

ಮಹಾಲಿಂಗಪುರ: ಕಷ್ಟ ಕಾಲದಲ್ಲಿ ಸಹಾಯ ಮಾಡಿದರಿಗೆ ಜನತೆ ಸ್ಮರಿಸುತ್ತಾರೆ. ಅಂತಹ ಕಾರ್ಯ ಮಾಡಿದ ಡಾ| ಎ.ಆರ್‌.ಬೆಳಗಲಿ ಅವರ ಕಾರ್ಯ ಅನುಕರಣೀಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

Advertisement

ಮಹಾಲಿಂಗಪುರದ ಖ್ಯಾತ ವೈದ್ಯರು, ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‌ ಮಾಜಿ ಜಿಲ್ಲಾ ಉಪಾಧ್ಯಕ್ಷರಾದ ಡಾ| ಎ.ಆರ್‌.ಬೆಳಗಲಿ ಅವರು ಕಾಂಗ್ರೆಸ್‌ ಪಕ್ಷದ ಕೊರೊನಾ ನಿಧಿ ಗೆ ದೇಣಿಗೆ ನೀಡಿದ 1 ಲಕ್ಷ ರೂಗಳ ಚೆಕ್‌ ಸ್ವೀಕರಿಸಿ ಮಾತನಾಡಿದ ಅವರು, ಕೊರೊನಾ ಸಮಯದಲ್ಲಿ ಬಡವರು, ಮಧ್ಯಮ ವರ್ಗದವರು ತೊಂದರೆಗೆ ಸಿಲುಕಿದ್ದಾರೆ. ಅವರ ನೆರವಿಗೆ ನಿಲ್ಲುವುದು ಸತ್ಕಾರ್ಯವಾಗಿದೆ ಎಂದರು. ದೇಣಿಗೆ ನೀಡಿದ ಡಾ| ಎ.ಆರ್‌.ಬೆಳಗಲಿ ಮಾತನಾಡಿ ಜನರು ತೊಂದರೆಯಲ್ಲಿದ್ದಾಗ ಅವರ ಬೆನ್ನಿಗೆ ನಿಲ್ಲುವುದು ಕಾಂಗ್ರೆಸ್‌ ಪಕ್ಷ ಮುಖ್ಯ ಧ್ಯೆಯವಾಗಿದೆ ಎಂದರು.

ಕೆಪಿಸಿಸಿ ರಾಜ್ಯ ಒಬಿಸಿ ಘಟಕದ ಉಪಾಧ್ಯಕ್ಷ ಬಸವರಾಜ ಕೊಕಟನೂರ, ಯೂತ್‌ ಕಾಂಗ್ರೆಸ್‌ ಉಪಾಧ್ಯಕ್ಷ ಯಶವಂತ ಮಂಗರಿ, ಭರಮು ಉಳ್ಳಾಗಡ್ಡಿ, ಸಂಗಮೇಶ ಮುಧೋಳ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಚಂದ್ರಶೇಖರ ಕುರಿ, ಶಂಕರ ಕೆಸರಗೊಪ್ಪ, ಅರುಣ ಗಾಣಿಗೇರ, ಮಹಾಲಿಂಗ ಅಂಬಿಗೇರ ಸೇರಿದಂತೆ ಹಲವರು ಇದ್ದÃ

 

Advertisement

Udayavani is now on Telegram. Click here to join our channel and stay updated with the latest news.

Next