Advertisement

Heart Attack: ಪಂಜಿಮೊಗರು ನಿವಾಸಿ ಅಕ್ತರ್‌ ದುಬಾೖಯಲ್ಲಿ ಹೃದಯಾಘಾತದಿಂದ ಸಾವು

12:12 AM Oct 27, 2023 | Team Udayavani |

ಮಂಗಳೂರು: ಕೂಳೂರು ಪಂಜಿಮೊಗರು ವಿದ್ಯಾನಗರ ನಿವಾಸಿ ಅಕ್ತರ್‌ (ಅಕ್ಕು) (27) ಅವರು ದುಬಾೖ ಸಲಾವುದ್ದೀನ್‌ ಎಂಬಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Advertisement

ಕಳೆದ 7 ತಿಂಗಳಿನಿಂದ ದುಬಾೖಯಲ್ಲಿ ಕೆಲಸದಲ್ಲಿದ್ದ ಅವರು, ಕರ್ತವ್ಯ ಮುಗಿಸಿ ರೂಮಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಏಳದೇ ಇದ್ದು ಜತೆಯಲ್ಲಿದ್ದವರು ಪರಿಶೀಲಿಸಿದಾದ ಅವರು ಮೃತಪಟ್ಟಿರುವುದು ತಿಳಿದು ಬಂದಿದೆ. ಪಂಜಿಮೊಗರು ನಿವಾಸಿ ಮುಹಮ್ಮದ್‌ ಮತ್ತು ಮರಿಯಮ್ಮ ದಂಪತಿಯ ಪುತ್ರರಾಗಿದ್ದು, ಇಬ್ಬರು ಸಹೋದರರು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
ಮೃತದೇಹವನ್ನು ಊರಿಗೆ ತರುವ ನಿಟ್ಟಿನಲ್ಲಿ ಕೆಸಿಎಫ್‌ ಸಂಘಟನೆಯ ಪದಾಧಿಕಾರಿಗಳು ಮತ್ತು ಸೌದಿಯಲ್ಲಿರುವ ಮೃತರ ಸಹೋದರ ಇರ್ಫಾನ್‌ ಅವರು ಕಾರ್ಯಪ್ರವೃತ್ತರಾಗಿದ್ದು, ಶುಕ್ರವಾರ ಮಂಗಳೂರು ತಲುಪುವ ಸಾಧ್ಯತೆಯಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next