Advertisement

ಸಿನಿಪ್ರಿಯರ ಗಮನ ಸೆಳೆದ “ಕೃಷ್ಣ ಟಾಕೀಸ್‌’ಚಿತ್ರದ “ಮನಮೋಹನ…’ಹಾಡು

03:26 PM Jan 22, 2021 | Team Udayavani |

ನಟ ಕೃಷ್ಣ ಅಜೇಯ್‌ ರಾವ್‌ ಈ ವರ್ಷ ಮತ್ತೂಂದು ಕೃಷ್ಣವತಾರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅದು “ಕೃಷ್ಣ ಟಾಕೀಸ್‌’ನಲ್ಲಿ. ಅಜೇಯ್‌ ರಾವ್‌ ಸಕ್ಸಸ್‌ ಚಿತ್ರಗಳ “ಕೃಷ್ಣ’ ಬ್ರ್ಯಾಂಡ್‌ ನೇಮ್‌ ಈ ಚಿತ್ರದಲ್ಲೂ ಮುಂದುವರೆದಿದ್ದು, ಈ ಬಾರಿ “ಕೃಷ್ಣ ಟಾಕೀಸ್‌’ನಲ್ಲಿ ಅಜೇಯ್‌ ತುಂಬ ಗಂಭೀರವಾಗಿರುವಂಥ ಜರ್ನಲಿಸ್ಟ್‌ ಪಾತ್ರಕ್ಕೆ ಜೀವ ತುಂಬಿದ್ದಾರೆ.  ಸದ್ಯ ಅಜೇಯ್‌ ರಾವ್‌ ಅಭಿನಯದ “ಕೃಷ್ಣ ಟಾಕೀಸ್‌’ ರಿಲೀಸ್‌ಗೆ ರೆಡಿಯಾಗಿದ್ದು, ಚಿತ್ರತಂಡ ನಿಧಾನವಾಗಿ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.

Advertisement

ಕೆಲ ದಿನಗಳ ಹಿಂದಷ್ಟೇ “ಕೃಷ್ಣ ಟಾಕೀಸ್‌’ ಚಿತ್ರದ “ನೈಟಿ ಮಾತ್ರ ಹಾಕ್ಕೋಬೇಡ…’ ಎಂಬ ಡ್ಯಾನ್ಸ್‌ ನಂಬರ್‌ ಹಾಡಿನ ಮೂಲಕ ಮಾಸ್‌ ಆಡಿಯನ್ಸ್‌ ಗಮನ ಸೆಳೆದಿದ್ದ ಚಿತ್ರತಂಡ, ಸಂಕ್ರಾಂತಿ ಹಬ್ಬದ ಸಂದರ್ಭದಲಿ “ಮನಮೋಹನ…’ ಎಂಬ ಲಿರಿಕಲ್‌ ವಿಡಿಯೋ ಸಾಂಗ್‌ ಬಿಡುಗಡೆ ಮಾಡಿದೆ.

ಇನ್ನು ಈ ಮೆಲೋಡಿ ರೊಮ್ಯಾಂಟಿಕ್‌ ಲಿರಿಕಲ್‌ ವಿಡಿಯೋ ಸಾಂಗ್‌ ನಿಧಾನವಾಗಿ ಕೇಳುಗರ ಗಮನ ಸೆಳೆಯುತ್ತಿದ್ದು, ಹಾಡು ಬಿಡುಗಡೆಯಾದ ಕೆಲವೇ ದಿನದಲ್ಲಿ ಯು-ಟ್ಯೂಬ್‌ನಲ್ಲಿ 1.7 ಮಿಲಿಯನ್ಸ್‌ ವೀವ್ಸ್‌ ಪಡೆದುಕೊಂಡಿದೆ. ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ಸಂಯೋಜನೆಯ ಈ ಹಾಡಿಗೆ ವಿಹಾನ್‌ ಆರ್ಯ ಮತ್ತು ಅನ್ವೇಷಾ ಧ್ವನಿಯಾಗಿದ್ದು, ನಿರ್ದೇಶಕ ವಿಜಯಾನಂದ್‌ ಸಾಲುಗಳನ್ನು ಬರೆದಿದ್ದಾರೆ.

ಇದನ್ನೂ ಓದಿ:‘ಇನ್ಸ್‌ಪೆಕ್ಟರ್‌ ವಿಕ್ರಂ’ ರೆಡಿ ಟು ರಿಪೋರ್ಟಿಂಗ್‌ …

ಇನ್ನು “ಕೃಷ್ಣ ಟಾಕೀಸ್‌’ ಚಿತ್ರದ ಹಾಡುಗಳಿಗೆ ಕೇಳುಗರಿಂದ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಮಾತನಾಡುವ ಸಂಗೀತ ನಿರ್ದೇಶಕ ಶ್ರೀಧರ್‌ ವಿ. ಸಂಭ್ರಮ್‌, “ಅಜೇಯ್‌ ರಾವ್‌ ಅಭಿನಯದ “ಕೃಷ್ಣ’ ಸೀರಿಸ್‌ನ ಎಲ್ಲ ಸಿನಿಮಾಗಳಲ್ಲೂ ಒಂದೆರಡು ಮೆಲೋಡಿ ರೊಮ್ಯಾಂಟಿಕ್‌ ಹಾಡುಗಳು ಹಿಟ್‌ ಆಗುತ್ತಲೇ ಇವೆ. ಇಂದಿಗೂ ಆ ಹಾಡುಗಳು ಆಗಾಗ್ಗೆ ಕೇಳುಗರ ಬಾಯಲ್ಲಿ ಗುನುಗುಡುತ್ತಿರುತ್ತವೆ. ಸಾಲಿಗೆ ಈಗ “ಕೃಷ್ಣ ಟಾಕೀಸ್‌’ ಹಾಡು ಕೂಡ ಸೇರ್ಪಡೆಯಾಗುತ್ತಿದೆ. “ಕೃಷ್ಣ ಟಾಕೀಸ್‌’ನಲ್ಲಿ ಮೂರು ಹಾಡುಗಳಿದ್ದು, ಈಗಾಗಲೇ ರಿಲೀಸ್‌ ಆಗಿರುವ ಎರಡು ಹಾಡುಗಳಿಗೂ ಆಡಿಯನ್ಸ್‌ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆ. ಹಾಡುಗಳು ಹಿಟ್‌ ಆಗುತ್ತಿದೆ. ಆದಷ್ಟು ಬೇಗ “ನೂರೆಂಟು ಸಂದೇಹ, ಕಗ್ಗಂಟು ಸಂದೇಶ…’ ಎಂಬ ಮೂರನೇ ಹಾಡನ್ನು ರಿಲೀಸ್‌ ಮಾಡುವ ಯೋಚನೆಯಲ್ಲಿದ್ದೇವೆ’ ಎನ್ನುತ್ತಾರೆ.

Advertisement

ಇನ್ನು “ಕೃಷ್ಣ ಟಾಕೀಸ್‌’ ಚಿತ್ರದಲ್ಲಿ ಅಜೇಯ್‌ ರಾವ್‌ಗೆ ಅಪೂರ್ವ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಸಿಂಧೂ ಲೋಕನಾಥ್‌, ಚಿಕ್ಕಣ್ಣ, ಪ್ರಮೋದ್‌ ಶೆಟ್ಟಿ, ಪ್ರಕಾಶ್‌ ತೂಮಿನಾಡು, ಶೋಭರಾಜ್‌, ಮಂಡ್ಯ ರಮೇಶ್‌, ಯಶ್‌ ಶೆಟ್ಟಿ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಗೋಕುಲ್‌ ಎಂಟರ್‌ಟೈನರ್’ ಬ್ಯಾನರ್‌ನಲ್ಲಿ ಗೋವಿಂದ ರಾಜು ಆಲೂರ್‌ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಹಿಂದೆ “ಓಳ್‌ ಮುನ್ಸಾಮಿ’ ಚಿತ್ರವನ್ನು ನಿರ್ದೇಶಿಸಿದ್ದ ವಿಜಯಾನಂದ್‌ “ಕೃಷ್ಣ ಟಾಕೀಸ್‌’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

ಜಿ.ಎಸ್‌. ಕಾರ್ತಿಕ ಸುಧನ

Advertisement

Udayavani is now on Telegram. Click here to join our channel and stay updated with the latest news.

Next