Advertisement

ಏರ್‌ಇಂಡಿಯಾಗೆ ಹೈಜಾಕ್‌ ಭೀತಿ!

12:55 AM Feb 24, 2019 | |

ಹೊಸದಿಲ್ಲಿ: ಮುಂಬಯಿ ನಲ್ಲಿರುವ ಏರ್‌ ಇಂಡಿಯಾ ಕಂಟ್ರೋಲ್‌ ಸೆಂಟರ್‌ಗೆ ಶನಿವಾರ ವಿಮಾನ ಅಪಹರಣದ ಬೆದರಿಕೆ ಕರೆ ಬಂದಿದ್ದು, ಭಾರೀ ಆತಂಕ ಸೃಷ್ಟಿಸಿತ್ತು. ಬೆದರಿಕೆ ಕರೆ ವರದಿಯಾಗುತ್ತಿದ್ದಂತೆ ಎಲ್ಲಾ ವಿಮಾನಯಾನ ಕಂಪೆನಿಗಳು, ವಿಮಾನ ನಿಲ್ದಾಣ ಭದ್ರತಾ ಪಡೆಯು ಕಠಿನ ತಪಾಸಣೆಯನ್ನು ಕೈಗೊಳ್ಳುವಂತೆ ವಿಮಾನ ಯಾನ ಇಲಾಖೆ ಸೂಚಿಸಿದೆ. 

Advertisement

ಪಾಕ್‌ಗೆ ತೆರಳಲಿರುವ ವಿಮಾನ ಅಪಹರಣ ಮಾಡುವುದಾಗಿ ಬೆದರಿಗೆ ಬಂದಿತ್ತು.  ಪುಲ್ವಾಮಾ ದಾಳಿ ಹಿನ್ನೆಲೆ ಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಪಾರ್ಕಿಂಗ್‌ ಪ್ರದೇಶದಲ್ಲಿ ಕಾರುಗಳ ಸಮಗ್ರ ತಪಾಸಣೆ, ಸಿಬಂದಿ, ಪ್ರಯಾಣಿಕರು, ಪ್ರತಿ ಸಾಮಗ್ರಿ ಸೂಕ್ಷ್ಮವಾಗಿ ತಪಾಸಣೆ ಮಾಡಬೇಕು ಎಂದು ಸೂಚಿಸಲಾಗಿತ್ತು.   ಜತೆಗೆ, ಎಲ್ಲ ವಿಮಾನ ನಿಲ್ದಾಣಗಳಲ್ಲೂ ಭದ್ರತಾ ಸಿಬಂದಿ ಸಂಖ್ಯೆಯನ್ನು ಹೆಚ್ಚಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next