Advertisement

ಕರ್ನಾಟಕ ಚುನಾವಣೆ : 3 ಕ್ಷೇತ್ರಗಳಿಂದ ಸ್ಪರ್ಧಿಸುವ ಎಐಎಡಿಎಂಕೆ

04:18 PM Apr 21, 2018 | udayavani editorial |

ಚೆನ್ನೈ : ತಮಿಳು ನಾಡಿನ ಆಳುವ ಎಐಎಡಿಎಂಕೆ ಪಕ್ಷ ಮೇ 12ರಂದು ನಡೆಯುವ 224 ಸದನಬಲದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮೂರು ಕ್ಷೇತ್ರಗಳಿಂದ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಿದೆ. 

Advertisement

ಎಐಎಡಿಎಂಕೆ ಸ್ಪರ್ಧಿಸಲಿರುವ ಮೂರು ಕ್ಷೇತ್ರಗಳೆಂದರೆ ಹನೂರು, ಗಾಂಧೀನಗರ ಮತ್ತು ಕೋಲಾರ ಗೋಲ್ಡ್‌ ಫೀಲ್ಡ್‌  ಎಂದು  ಪಕ್ಷದ ಸಂಚಾಲಯ ಓ ಪನ್ನೀರಸೆಲ್ವಂ ಮತ್ತು ಸಹ ಸಂಚಾಲಕ ಕೆ ಪಳನಿಸ್ವಾಮಿ ಅವರು ಮಾಧ್ಯಮಕ್ಕೆ ತಿಳಿಸಿದರು. 

ಗಾಂಧೀ ನಗರ ಕ್ಷೇತ್ರದಿಂದ ಎಂ ಪಿ ಯುವರಾಜ್‌, ಹನೂರು ಕ್ಷೇತ್ರದಿಂದ ಆರ್‌ ಪಿ ವಿಷ್ಣು ಕುಮಾರ್‌ ಮತ್ತು ಕೋಲಾರ್‌ ಗೋಲ್ಡ್‌ ಫೀಲ್ಡ್‌ ಕ್ಷೇತ್ರದಿಂದ ಎಂ ಅನ್‌ಬು ಸ್ಪರ್ಧಿಸಲಿದ್ದಾರೆ ಎಂದವರು ಹೇಳಿದರು. 

2013ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಐದು ಕ್ಷೇತ್ರಗಳಿಂದ ಸ್ಪರ್ಧಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next