Advertisement

ಆಹಾರ್‌ ನಿಯೋಗದಿಂದ ಬಿಎಂಸಿ ವಾರ್ಡ್‌ ಅಧಿಕಾರಿ ಭೇಟಿ

02:57 PM Jul 03, 2018 | |

ಮುಂಬಯಿ: ಹೊಟೇಲಿಗರ ಪ್ರತಿಷ್ಠಿತ ಸಂಸ್ಥೆಯಾಗಿರುವ ಆಹಾರ್‌ನ ನಿಯೋಗವೊಂದು  ಮುಂಬಯಿ ಮಹಾನಗರ ಪಾಲಿಕೆಯ ವಾರ್ಡ್‌ ಅಧಿಕಾರಿಯನ್ನು ಭೇಟಿಯಾಗಿ ಹೊಟೇಲಿಗರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಿತು.

Advertisement

ಆಹಾರ್‌ನ ಉಪಾಧ್ಯಕ್ಷ ಕೃಷ್ಣ ವಿ. ಶೆಟ್ಟಿ ಅವರ ನೇತೃತ್ವದಲ್ಲಿ ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಮುಂಬಯಿ ಮಹಾನಗರ ಪಾಲಿಕೆಯ ವಾರ್ಡ್‌ ಅಧಿಕಾರಿಯನ್ನು ಭೇಟಿಯಾಗಿ ಮಾನ್ಸೂನ್‌ ಶೆಡ್‌, ಗಾರ್ಬೆಜ್‌ ವ್ಯವಸ್ಥೆ, ನೂತನ ಫಾಯರ್‌ ನಿಯಮಾವಳಿಗಳು, ಸೈನ್‌ಬೋರ್ಡ್‌ ಲೈಸನ್ಸ್‌ ನವೀಕರಣ ಸಹಿತ ವಿವಿಧ ವಿಷಯಗಳ ಕುರಿತಂತೆ ಚರ್ಚಿಸಿ ವಿವಿಧ ಸಮಸ್ಯೆಗಳಿಗೆ ಅನುಗುಣವಾಗಿ ಮನವಿ ಸಲ್ಲಿಸಿದರು.

ಹೊಟೇಲಿಗರು ಅನುಭವಿಸುತ್ತಿ ರುವ ವಿವಿಧ ರೀತಿಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಇತ್ಯರ್ಥ ಗೊಳಿಸಲು ಹಾಗೂ  ಮುಂಬಯಿ ಮಹಾನಗರ ಪಾಲಿಕೆ ಮತ್ತು ಆಹಾರ್‌ ಸಂಸ್ಥೆಯ  ಸದಸ್ಯರ ಮಧ್ಯೆ ಸ್ನೇಹ ಸಂಪರ್ಕ ನಿರ್ಮಿಸುವ ಉದ್ದೇಶ ವನ್ನಿಟ್ಟುಕೊಂಡು ಆಹಾರ್‌ ನಿಯೋಗವು ಈ ಸಂದರ್ಭದಲ್ಲಿ ಚರ್ಚಿಸಿತು. 

ಆಹಾರ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ವಲಯಗಳ ಪದಾಧಿಕಾರಿಗಳು, ಉಪಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next