Advertisement

ಬಸ್ರೂರು ಪರಿಸರದಲ್ಲಿ ಸುಗ್ಗಿ ಬೆಳೆಗೆ ಶುಭಾರಂಭ

02:05 AM Nov 20, 2018 | Team Udayavani |

ಬಸ್ರೂರು: ಇಲ್ಲಿನ ಬಳ್ಕೂರು, ಕಂಡ್ಲೂರು, ಕಂದಾವರ, ಜಪ್ತಿ, ಆನಗಳ್ಳಿ, ಕೋಣಿ ಮುಂತಾದ ಪ್ರದೇಶಗಳಲ್ಲಿ ಮುಂಗಾರಿನ ಕಾತಿ ಬೆಳೆಯು ಮುಗಿಯುತ್ತಿದ್ದಂತೆ ರೈತನೀಗ ಸುಗ್ಗಿ ಬೆಳೆಗೆ ತಯಾರಾಗಿದ್ದಾನೆ. ಕುಂದಾಪುರ ಪರಿಸರದಲ್ಲಿ ಬೆಳೆಯುವ ಕಾತಿ ( ಕಾರ್ತಿ) ಬೆಳೆಗೆ 4.5 ತಿಂಗಳು ಬೇಕಾದರೆ ಸುಗ್ಗಿ ಬೆಳೆಗೆ 3.5ರಿಂದ 4 ತಿಂಗಳುಗಳ ಕಾಲ ಸಾಕಾಗುತ್ತದೆ. ಈ ಭಾಗದಲ್ಲಿ ಕಾತಿ ಬೆಳೆಗೆ ಹೆಚ್ಚಾಗಿ ರೈತ ಬಳಸಿದ್ದು ಎಂ.ಒ. 4 ತಳಿ. ಈಗ ಆರಂಭವಾಗುತ್ತಿರುವ ಸುಗ್ಗಿ ಬೆಳೆಗೂ ರೈತ ಎಂ.ಒ.4 ತಳಿಯ ಜತೆ ಇನ್ನಿತರ ಬೀಜಗಳನ್ನೂ ಬಳಸುತ್ತಿದ್ದಾನೆ. ಕಾತಿ ಬೆಳೆ ಕೆಲವರು ಮಳೆ ಯನ್ನೇ ನಂಬಿ ಬೆಳೆ ಬೆಳೆಸಿದ್ದರೆ ಸುಗ್ಗಿ ಬೆಳೆಗೆ ಕೃಷಿ ಪಂಪ್‌ಸೆಟ್‌ ಆಧಾರವಾಗಿದೆ.

Advertisement

ಈಗಾಗಲೇ ಹಲವು ರೈತರು ಗದ್ದೆ ಹದ ಮಾಡಿ ಕೃಷಿ ಯೋಗ್ಯವನ್ನಾಗಿಸಿದ್ದಾರೆ. ಸುಮಾರು 20ರಿಂದ 25 ದಿನಗಳಲ್ಲಿ ಹಾಕಿದ ಬೀಜ ಗದ್ದೆಯಲ್ಲಿ ನಾಟಿ ಮಾಡಲು ಯೋಗ್ಯವಾಗಿರುತ್ತದೆ. ಈ ಮಧ್ಯೆ ಕೆಲವು ರೈತರು ಗದ್ದೆಗಳಲ್ಲಿ ಸುಗ್ಗಿ ಬೆಳೆಯುವ ಬದಲಾಗಿ ಉದ್ದು ಮುಂತಾದ ಧಾನ್ಯದ ಬೀಜ ಹಾಕಿದ್ದಾರೆೆ. ಆದರೆ ಬಸ್ರೂರು ಪ್ರದೇಶದಲ್ಲಿ ಹೆಚ್ಚಿನ ರೈತರು ಸುಗ್ಗಿ ಬೆಳೆಯ ಆಶಾಭಾವನೆಯನ್ನು ಹೊಂದಿದ್ದಾರೆ. ಕಾತಿ ಬೆಳೆಗೆ ಮಾಡಿದ ಸಾಲದ ಲೆಕ್ಕಾಚಾರ ಇನ್ನೂ ಮುಕ್ತಾಯವಾಗದ ಕಾರಣ ಇನ್ನೂ ಬ್ಯಾಂಕ್‌ನಲ್ಲಿ ಯಾವುದೇ ರೈತ ಸುಗ್ಗಿ ಬೆಳೆಗೆ ಈ ಭಾಗದಲ್ಲಿ ಸಾಲ ಮಾಡಿಲ್ಲ. ಸುಗ್ಗಿ ಬೆಳೆ 3.5 ರಿಂದ 4 ತಿಂಗಳಲ್ಲಿ ಮುಗಿಯುತ್ತಲೇ ಕೊನೆಯ ಬೆಳೆ ಕೊಳ್ಕೆ ಬೇಸಾಯ ನಡೆಯಲಿದೆ.

ಉತ್ತಮ ಫ‌ಸಲಿನ ನಿರೀಕ್ಷೆ
ನಾನು ಪ್ರತಿ ವರ್ಷ ಸುಗ್ಗಿ ಬೆಳೆಯ ಬದಲು ಧಾನ್ಯವನ್ನೇ ಗದ್ದಗೆ ಹಾಕುತ್ತಿದ್ದೆ. ಆದರೆ ಈ ಬಾರಿ ಕಾತಿ ಬೆಳೆ ಸಾಧಾರಣವಾಗಿ ಬಂದುದರಿಂದ ಇರುವ ಹಣವನ್ನೇ ಬಳಸಿ ಮತ್ತೆ ಸ್ವಲ್ಪ ಹಣವನ್ನು ಕೈಗಡ ಮಾಡಿ ಸುಗ್ಗಿ ಬೆಳೆಗೆ ಕೈಹಾಕಿದ್ದೇನೆ. ಸಾಲದ ಲೆಕ್ಕಾಚಾರ ಇನ್ನೂ ಆಗಿಲ್ಲ. ಸುಗ್ಗಿ ಬೆಳೆಯಲ್ಲಿ ಉತ್ತಮ ಫಸಲಿನ ನಿರೀಕ್ಷೆಯಿದೆ.
– ರಾಮ ಪೂಜಾರಿ, ಕೃಷಿಕ ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next