Advertisement

ಕಾವ್ಯ ಮಲ್ಲಿಗೆ: ಮಳೆ ನಿಂತ ಮೇಲೆ

06:19 PM Jun 13, 2021 | Team Udayavani |

ಬಿಡದೆ.. ಧೋ..!! ಎಂದು

Advertisement

ಸುರಿವ ಮಳೆ ಬಿಡಬಾರದೇ ಬೇಗ

ಎಂದು ಮನ ಹಂಬಲಿಸುತ್ತಿತ್ತು.

ನನ್ನ ಯಾವ ಗೋಜಿಗೂ,

ತಲೆ ಕೆಡಿಸಿಕೊಳ್ಳದೆ ತನ್ನ

Advertisement

ಪಾಡಿಗೆ ತಾನು ಮಳೆ ಸುರಿಯುತ್ತಿತ್ತು.

ತಲೆಯೆತ್ತಿ ನೋಡಿದರೆ,

ಆಗಸದ ತುಂಬೆಲ್ಲಾ ಕಪ್ಪನೆ ಮೋಡ.

ನಮ್ಮ ತೋಟದ ಮನೆಯ ಮಣ್ಣಿನ

ದಾರಿಯಲ್ಲೆಲ್ಲಾ ಪುಟ್ಟ ಪುಟ್ಟ ಕೆರೆ-ದಡ.

ಮಣ್ಣಿನ ವಾಸನೆಯ ಜತೆ,

ಮೈದುಂಬಿ ನಿಂತ ವನಸಿರಿ ನೋಡ.

ಮರೆತು ನಲಿದಿದೆ ಮನ, ಎಲ್ಲ ದುಗುಡ.

ಮಲೆನಾಡ ವನಸಿರಿಯಂತೆ

ರೋಚಕ ಹೆಣ್ಣಿನ ಚೆಲುವು.

ಗಂಡಿನ ಪ್ರೀತಿಯ ವರ್ಷಧಾರೆ

ಸಿಕ್ಕಾಗಲೆ ತಾನೇ, ಆ ಚೆಂದಕೆ

ಇನ್ನಷ್ಟೂ ಮೋಹಕವು.

ಕೆಸರಲ್ಲಿ ಆಡಬೇಕೆಂಬ

ಆಸೆ ಕಾಡಿತ್ತು ಮಗುವಿನಂತೆ,

ಕಂಡವರು ನಕ್ಕಾರು,

ಎಂದು ಸುಮ್ಮನೆ ನಿಂತೆ.

ಅದೇಕೋ ಗೊತ್ತಿಲ್ಲ,

ಮಳೆ ನಿಂತ ಮೇಲೆ… ಮತ್ತೆ

ಮಳೆ ಬರಬಾರದೇ ಎಂದು

ನಾ ಕಾಯುತ್ತಾ…. ನಿಂತೆ..!!

 

ವಿದ್ಯಾಶ್ರೀ ಬಿ.

ಬಳ್ಳಾರಿ

Advertisement

Udayavani is now on Telegram. Click here to join our channel and stay updated with the latest news.

Next