Advertisement

ಬೆಂಕಿಯಿಂದ ಎಚ್ಚೆತ್ತ ಬಿಎಂಸಿ: ಚುರುಕಿನ ಡೆಮಾಲಿಶನ್‌ ಕಾರ್ಯಾಚರಣೆ

04:06 PM Dec 30, 2017 | Team Udayavani |

ಮುಂಬಯಿ : ಮುಂಬಯಿ ಲೋವರ್‌ ಪರೇಲ್‌ನಲ್ಲಿನ ಕಮಲಾ ಮಿಲ್ಸ್‌ ಕಾಂಪ್ಲೆಕ್ಸ್‌ನಲ್ಲಿ  14 ಮಂದಿಯನ್ನು ಬಲಿಪಡೆದ ಭೀಕರ ಅಗ್ನಿ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ಬೃಹನ್‌ ಮುಂಬಯಿ ಮುನಿಸಿಪಲ್‌ ಕಾರ್ಪೊರೇಶನ್‌ ಇದೀಗ ಈ ಆವರಣದೊಳಗಿನ ಕಾನೂನುಬಾಹಿರ ರಚನೆಗಳನ್ನು ನಾಶಪಡಿಸುವ ಚುರುಕಿನ ಕಾರ್ಯಾಚರಣೆಯನ್ನು ಆರಂಭಿಸಿದೆ. 

Advertisement

ಲೋವರ್‌ ಪರೇಲ್‌ನಲ್ಲಿನ ಅನಧಿಕೃತ ಹಾಗೂ ಪರವಾನಿಗೆ ಇಲ್ಲದ ರಚನೆಗಳನ್ನು ನಿರ್ನಾಮ ಮಾಡುವ ಕಾರ್ಯಾಚರಣೆಯಲ್ಲಿ ಬಿಎಂಸಿ ಅಧಿಕಾರಿಗಳು ತೊಡಗಿಕೊಂಡಿದ್ದ ದೃಶ್ಯ ಇಂದು ಶನಿವಾರ ಕಂಡುಬಂತು.

ಯೋಜನೆಯ ಪ್ರಕಾರ ಬಿಎಂಸಿ ಅಧಿಕಾರಿಗಳನ್ನು ಎರಡು ತಂಡವಾಗಿ ವಿಂಗಡಿಸಲಾಗಿದೆ. ಇವುಗಳು ರಘುವಂಶಿ ಮಿಲ್ಸ್‌ ಮತ್ತು ಪೆನಿನ್‌ಸುಲಾ ಬೈಪಾಸ್‌ ಪಾರ್ಕ್‌ ಪ್ರದೇಶದಲ್ಲಿನ ಅಕ್ರಮ ರಚನೆಗಳನ್ನು ನಾಶಪಡಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. 

ಕಮಲಾ ಮಿಲ್ಸ್‌ ಆವರಣದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತಕ್ಕೆ ಸಂಬಂಧಿಸಿ ಕರ್ತವ್ಯ ನಿರ್ಲಕ್ಷ್ಯ ತೋರಿದ ಐವರು ಬಿಎಂಸಿ ಅಧಿಕಾರಿಗಳನ್ನು ನಗರಾಡಳಿತೆಯು ನಿನ್ನೆ ಶುಕ್ರವಾರ ಅಮಾನತು ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next