Advertisement

Parvathamma Rajkumar ಸೋದರಳಿಯ ನಟ ಸೂರಜ್ ಗೆ ಅಪಘಾತ: ಗಂಭೀರ ಪೆಟ್ಟು

01:23 PM Jun 25, 2023 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ಬೈಕ್ ಹಾಗೂ ಟಿಪ್ಪರ್ ನಡುವೆ ಅಪಘಾತ‌ ಸಂಭವಿಸಿ ಪಾರ್ವತಮ್ಮ‌ ರಾಜ್ ಕುಮಾರ್ ಸೋದರಳಿಯ, ಎಸ್.ಎ.ಶ್ರೀನಿವಾಸ್ ಪುತ್ರ ಸೂರಜ್‌ ಅವರ ಕಾಲು ತುಂಡರಿಸಿರುವ ಘಟನೆ ತಾಲೂಕಿನ‌ ಹಿರೀಕಾಟಿ ಸಮೀಪದ ಚಿಕ್ಕಹುಂಡಿ ಗೇಟ್ ಬಳಿ ನಡೆದಿದೆ.

Advertisement

ಸೂರಜ್ ಊಟಿಗೆ ಸೋಲೋ‌ ಟ್ರಿಪ್ ತೆರಳಿ ನಂತರ ಹಿಂತಿರುಗುವಾಗ ಟಿಪ್ಪರ್ ಢಿಕ್ಕಿಯಾಗಿದೆ. ನಂತರ ಬೇಗೂರು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಾಳುವನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿ ದಾಖಲು ಮಾಡಿದರು‌.

ಅಪಘಾತದಲ್ಲಿ ಬಲಗಾಲು ಸಂಪೂರ್ಣ ನಜ್ಜುಗುಜ್ಜಾಗಿದ್ದರಿಂದ ತೆಗೆಯಲಾಗಿದೆ ಎಂದು ಮೂಲಗಳು ತಿಳಿಸಿವೆ‌. ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ ಎರಡು ವಾಹನಗಳನ್ನು ವಶಕ್ಕೆ ಪಡೆದ ಬೇಗೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇವರು ಭಗವಾನ್ ಶ್ರೀಕೃಷ್ಣ ಪರಮಾತ್ಮ ಸಿನಿಮಾದಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next