Advertisement

Actor Ramesh Aravind ನಾಳೆಯ ದರ್ಶನ್‌ಗಾಗಿ ಕಾದಿದ್ದೇವೆ

11:32 PM Sep 10, 2024 | Team Udayavani |

ಬೆಂಗಳೂರು: ಜೈಲಿನಲ್ಲಿರುವ ನಟ ದರ್ಶನ್‌ ಕುರಿತು ನಟ ರಮೇಶ್‌ ಅರವಿಂದ್‌ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ 3 ರೀತಿಯ ದರ್ಶನ್‌ ಇದ್ದಾರೆ. ಹಿಂದೆ ನೋಡಿರುವ ದರ್ಶನ್‌, ಒಬ್ಬ ಸ್ಟಾರ್‌ ನಟ, ಸಾಕಷ್ಟು ಸಾಧನೆ ಮಾಡಿದವರು. ಈಗಿರುವ ದರ್ಶನ್‌ ಒಂದು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ.

ಇನ್ನು ನಾಳೆಯ ದರ್ಶನ್‌, ಈ ಸಮಸ್ಯೆಯಿಂದ ಹೊರಬಂದ ಮೇಲೆ ಅವರು ಹೇಗಿರುತ್ತಾರೆ ಎಂಬುದು ಮುಖ್ಯವಾಗುತ್ತದೆ. ಜೀವನದಲ್ಲಿ ಯೂ ಟರ್ನ್ ಇಲ್ಲ. ಹಾಗಾಗಿ ಮುಂದೆ ಸಾಗಲೇಬೇಕು. ಒಂದು ವೇಳೆ ಶಿಕ್ಷೆಯಾದರೆ ಅನುಭವಿಸಬೇಕು. ನಮಗೆ ಗೊತ್ತಿರುವ ವ್ಯಕ್ತಿಯೊಬ್ಬರು ತಪ್ಪು ಮಾಡಿದ್ದಾರೆ. ಅವರು ಗೊತ್ತಿದ್ದಾರೆ ಎಂಬ ಮಾತ್ರಕ್ಕೆ ಅದು ತಪ್ಪಲ್ಲ ಎಂದು ಹೇಳಲಾಗದು.

ಜತೆಗೆ ಅದು ತಪ್ಪು ಎಂಬ ಕಾರಣಕ್ಕೆ ಈ ವ್ಯಕ್ತಿ ಗೊತ್ತಿಲ್ಲ ಎಂದು ಹೇಳವುದು ಸರಿಯಲ್ಲ. ಹಾಗಾಗಿ ನಾಳೆಯ ದರ್ಶನ್‌ಗಾಗಿ ನಾವೆಲ್ಲ ಎದುರು ನೋಡುತ್ತೇವೆ ಎಂದಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next