Advertisement

Actor Darshan ಅವನೇನು ಸಮಾಜಕ್ಕೆ ರೋಲ್‌ ಮಾಡೆಲ್ಲಾ?: ಸಚಿವ ರಾಜಣ್ಣ ಗರಂ

11:49 PM Aug 29, 2024 | Team Udayavani |

ಹಾಸನ: ನಟ ದರ್ಶನ್‌ ಪ್ರಕರಣದ ಬಗ್ಗೆ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರಲ್ಲಿ ಸುದ್ದಿಗಾರರು ಪ್ರತಿಕ್ರಿಯೆ ಬಯಸಿದಾಗ ಸಚಿವರು ಗರಂ ಆದರು. ಬೆಳಗ್ಗೆ, ಸಾಯಂಕಾಲ ಬರೀ ದರ್ಶನ್‌ ಸುದ್ದಿಯನ್ನೇ ತೋರಿಸುತ್ತಾ ಇದ್ದರೆ ನೋಡಲು ಅಸಹ್ಯ ಆಗುತ್ತೆ. ಅವನೇನು ಸಮಾಜಕ್ಕೆ ರೋಲ್‌ ಮಾಡೆಲ್ಲಾ? ಎಂದು ಪ್ರಶ್ನಿಸಿದರು.

Advertisement

ಮಾಡಬಾರದ್ದನ್ನು ಮಾಡಿದವರ ಮೇಲೆ ಕಾನೂನು ಕ್ರಮ ಆಗಲಿದೆ ಎಂದರು.

ಪರಂಗೆ ಭಡ್ತಿ ಕೊಡುತ್ತೇವೆಂದರೆ ತಪ್ಪಿಸಲಾದೀತೇ?: ರಾಜಣ್ಣ
ಹಾಸನ: ಮುಂಭಡ್ತಿ ಸಿಗುತ್ತದೆ ಎಂಬ ಗೃಹ ಸಚಿವ ಜಿ. ಪರಮೇಶ್ವರ್‌ ಹೇಳಿಕೆಗೆ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕೆ.ಎನ್‌. ರಾಜಣ್ಣ, ರಾಜ್ಯ ಸಚಿವ ಸಂಪುಟ ಪುನಾರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಪಕ್ಷದ ಹೈಕಮಾಂಡ್‌ ತೀರ್ಮಾನಕ್ಕೆ ಒಳಪಟ್ಟಿರುತ್ತದೆ.

ರಾಹುಲ್‌ ಗಾಂಧಿ ಅವರು ಪರಮೇಶ್ವರ್‌ಗೆ ಭಡ್ತಿ ಕೊಡುತ್ತೇವೆಂದರೆ ನಾವು ತಪ್ಪಿಸಲು ಆಗುವುದೇ?, ಹೈಕಮಾಂಡ್‌ ತೀರ್ಮಾನವೇ ಅಂತಿಮ ಎಂದು ಹೇಳಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next