Advertisement

Kollur Mookambika: ದರ್ಶನ್‌ ಬಂಧಮುಕ್ತಿಗಾಗಿ ಮೂಕಾಂಬಿಕೆಯ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ

09:43 AM Jul 26, 2024 | Team Udayavani |

ಕೊಲ್ಲೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಶೀಘ್ರ ಬಂಧಮುಕ್ತವಾಗಲೆಂದು ದರ್ಶನ್ ಪತ್ನಿ ಕೊಲ್ಲೂರು ಮೂಕಾಂಬಿಕೆ ಮೊರೆ ಹೋಗಿದ್ದಾರೆ,

Advertisement

ಅದರಂತೆ ಶುಕ್ರವಾರ ವಿಜಯಲಕ್ಷ್ಮಿ ಹಾಗೂ ಸಂಗಡಿಗರು ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪತಿ ಹೆಸರಿನಲ್ಲಿ ಚಂಡಿಕಾ ಯಾಗ ನಡೆಯುತ್ತಿದ್ದು ಪತ್ನಿ ವಿಜಯಲಕ್ಷ್ಮಿ ಭಾಗಿಯಾಗಿದ್ದಾರೆ.

ಜೋರಾಗಿ ಸುರಿಯುತ್ತಿರುವ ಮಳೆಯಲ್ಲೇ ದೇವಸ್ಥಾನಕ್ಕೆ ಐದು ಸುತ್ತು ಬಂದು ಜೈಲಿನಲ್ಲಿರುವ ತನ್ನ ಪತಿ ಆದಷ್ಟು ಬೇಗ ಬಂಧಮುಕ್ತವಾಗುವಂತೆ ಬೇಡಿಕೊಂಡಿದ್ದಾರೆ.

ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ಪತಿ ದರ್ಶನ್ ಅವರನ್ನ ಹೊರತರಲು ಪತ್ನಿ ವಿಜಯಲಕ್ಷ್ಮೀ ಹರಸಾಹಸ ಪಡುತ್ತಿದ್ದಾರೆ. ಪತಿ ದರ್ಶನ್‌ ಒಳಿತಿಗಾಗಿ ವಿಜಯಲಕ್ಷ್ಮೀ ಒದ್ದಾಡುತ್ತಿದ್ದಾರೆ. ವಕೀಲರ ಜೊತೆ ಚರ್ಚೆ ನಡೆಸಿರುವ ವಿಜಯಲಕ್ಷ್ಮೀ ಆಗಾಗ ಜೈಲಿಗೆ ಭೇಟಿಕೊಟ್ಟು ಪತಿ ದರ್ಶನ್​ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

ದರ್ಶನ್‌ಗೆ ಮನೆಯೂಟ, ಹಾಸಿಗೆ ಸೌಲಭ್ಯ ನೀಡಲು ಕೋರ್ಟ್‌ ನಕಾರ:
ಮನೆಯೂಟಕ್ಕೆ ಅನುಮತಿ ಕೋರಿ ನಟ ದರ್ಶನ್‌ (Darshan) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ ಮನೆಯ ಊಟ, ಹಾಸಿಗೆ ಹಾಗೂ ಬಟ್ಟೆಯನ್ನು ತರಿಸಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

Advertisement

ಗುರುವಾರ (ಜು.25ರಂದು) ಅರ್ಜಿಯ ವಿಚಾರಣೆಯನ್ನು ನಡೆಸಿದ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಮನೆ ಊಟ , ಹಾಸಿಗೆ, ಬಟ್ಟೆಯನ್ನು ತರುವಂತಿಲ್ಲ ಎನ್ನುವ ಮೂಲಕ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದೆ.

ಇದನ್ನೂ ಓದಿ: ಮಲೆನಾಡಲ್ಲಿ ಮಳೆಯ ಅಬ್ಬರ: ಶಿವಮೊಗ್ಗ ಜಿಲ್ಲೆಯ ಮೂರೂ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ

Advertisement

Udayavani is now on Telegram. Click here to join our channel and stay updated with the latest news.

Next