Advertisement

ಆಯಾ ರಾಮ್‌ ಗಯಾ ರಾಮ್‌ ಕಾಂಗ್ರೆಸ್‌ ಸಂಸ್ಕೃತಿ 

01:05 AM Jan 20, 2019 | Team Udayavani |

ಧಾರವಾಡ: ಈಗಲ್ಟನ್‌ ರೆಸಾರ್ಟ್‌ ಬಗ್ಗೆ ಸಾಕಷ್ಟು ವಿವಾದ ಹಾಗೂ ನೂರಾರು ಎಕರೆ ಸರ್ಕಾರಿ ಜಮೀನು ಅತಿಕ್ರಮಣ ಮಾಡಿದ ಆರೋಪ ಇದೆ. ಅದಿನ್ನೂ ವಿಚಾರಣೆಯಲ್ಲಿರುವಾಗ ಅದೇ ರೆಸಾರ್ಟ್‌ಗೆ ಹೋಗಿರೋದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನವರು ತಮ್ಮ ಶಾಸಕರನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿದ್ದಾರೆ. ಬೇರೆಯವರ ಟೀಕೆ ಮಾಡಲು ಇವರಿಗೇನು ಹಕ್ಕಿದೆ.

ತಮ್ಮ ಶಾಸಕರನ್ನು ಸರಿಯಾಗಿ ಇಟ್ಟುಕೊಳ್ಳಲು ಆಗದೆ ಮತ್ತೂಬ್ಬರ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್‌ ಶಾಸಕರು ಗಟ್ಟಿ ಇದ್ದಾರೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಅವರಿಗೆ ಟೀಕೆ ಮಾಡುವುದು ಮಾತ್ರ ಗೊತ್ತು, ಸರ್ಕಾರ ನಡೆಸುವುದು ಗೊತ್ತಿಲ್ಲ. ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಆಪರೇಷನ್‌ ಕಮಲ, ಪûಾಂತರ ಬಗ್ಗೆ ಮಾತಾಡುತ್ತಾರೆ.ಪಕ್ಷಾಂತರ ಮೊದಲು ಆರಂಭಿಸಿದ್ದೇ ಕಾಂಗ್ರೆಸ್‌. ಆಯಾ ರಾಮ್‌ ಗಯಾ ರಾಮ್‌ ಸಂಸ್ಕೃತಿ ಆರಂಭಿಸಿದ್ದು ಕಾಂಗ್ರೆಸ್‌. ಕಾಂಗ್ರೆಸ್‌ನ ಎಲ್ಲ ಶಾಸಕರು ರಾಮನಗರ ರೆಸಾರ್ಟ್‌ಗೆ ಹೋಗುತ್ತಾರೆ. ಈಗ ಹೊರಗೆ ಇರುವ ಸಚಿವರು, ಶಾಸಕರು ಸಹ ಸರ್ಕಾರಿ ವಿಸಿಟ್‌ಗಳನ್ನು ಮುಗಿಸಿ ಪುನಃ ರೆಸಾರ್ಟ್‌ ಸೇರುತ್ತಾರೆ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next