Advertisement

Bangalore: ಮಹಿಳೆಯನ್ನು ಎಳೆದೊಯ್ದು ಅತ್ಯಾಚಾರ, ಕೊಲೆ

10:22 PM Apr 04, 2024 | Team Udayavani |

ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ನಿರ್ಮಾಣ ಹಂತದ ಕಟ್ಟಡಕ್ಕೆ ಎಳೆದೊಯ್ದು ಯುವಕನೊಬ್ಬ ಆಕೆ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿರುವ ಘಟನೆ ಅಮೃತಹಳ್ಳಿಯಲ್ಲಿ ನಡೆದಿದ್ದು, ಈ ಸಂಬಂಧ ಉತ್ತರಪ್ರದೇಶ ಮೂಲದ ಆರೋಪಿಯನ್ನು ಬಂಧಿಸಲಾಗಿದೆ.

Advertisement

ರಾಯಚೂರಿನ ದೇವದುರ್ಗ ಮೂಲದ 55 ವರ್ಷದ ಮಹಿಳೆಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದ್ದು, ಈ ಸಂಬಂಧ  ಉತ್ತರಪ್ರದೇಶದ ಗೋರಖ್‌ಪುರದ ಸಚಿನ್‌ ಅಲಿಯಾಸ್‌ ಕರಣ್‌(19) ಎಂಬಾತನನ್ನು ಬಂಧಿಸಲಾಗಿದೆ.

ರಾಯಚೂರಿನ ದೇವದುರ್ಗ ತಾಲೂಕಿನ ಸಂತ್ರಸ್ತೆ ತಮ್ಮ ನಾಲ್ವರು ಮಕ್ಕಳು ಹಾಗೂ ಮೊಮ್ಮಕ್ಕಳ ಜತೆ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಅಮೃತಹಳ್ಳಿಯ ವರದರಾಜು ಲೇಔಟ್‌ನ ಕಾರ್ಮಿಕರ ಶೆಡ್‌ನ‌ಲ್ಲಿ ವಾಸವಾಗಿದ್ದರು. ನಾಲ್ವರು ಮಕ್ಕಳು ಕೆಲಸಕ್ಕೆ ಹೋಗುತ್ತಿದ್ದರೆ, ಸಂತ್ರಸ್ತೆ ಮನೆಯಲ್ಲೇ ಇರುತ್ತಿದ್ದರು.  ಆರೋಪಿ ಸಚಿನ್‌ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಟೈಲ್ಸ್‌ ಹಾಗೂ ಪೇಂಟಿಂಗ್‌ ಕೆಲಸ ಮಾಡಿಕೊಂಡು ಜಕ್ಕೂರಿನಲ್ಲಿ ವಾಸವಾಗಿದ್ದ.

ಆರೋಪಿ ಎ.2ರಂದು ರಾತ್ರಿ ಕೆಲಸ ಮುಗಿಸಿ ಸಮೀಪದ ಬಾರ್‌ಗೆ ಹೋಗಿ ಕಂಠಪೂರ್ತಿ ಮದ್ಯ ಸೇವಿಸಿದ್ದಾನೆ. ಅದೇ ವೇಳೆ ಸಂತ್ರಸ್ತೆ ಕೂಡ ಬಾರ್‌ಗೆ ಬಂದು ಮದ್ಯ ಸೇವಿಸಿದ್ದಾರೆ. ಅದನ್ನು ಗಮನಿಸಿದ ಆರೋಪಿ, ಬಾರ್‌ನಿಂದಲೇ ಸಂತ್ರಸ್ತೆಯನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ.

ಬಳಿಕ ವರದರಾಜು ಲೇಔಟ್‌ನ 8ನೇ ಕ್ರಾಸ್‌ನಲ್ಲಿರುವ ನಿರ್ಮಾಣ ಹಂತದ ಕಟ್ಟಡದ ರಸ್ತೆಯಲ್ಲಿ ಸಂತ್ರಸ್ತೆ ಹೋಗುವಾಗ ಆಕೆಯನ್ನು ಅಡ್ಡಗಟ್ಟಿ ಬೆದರಿಸಿ ಕಟ್ಟಡದೊಳಗೆ ಎಳೆದೊಯ್ದಿದ್ದಾನೆ. ಬಳಿಕ ಆಕೆ ಮೇಲೆ ಅತ್ಯಾಚಾರ ಎಸಗಿದ್ದು, ಪಾನಮತ್ತಳಾಗಿದ್ದ ಸಂತ್ರಸ್ತೆ ಅಸ್ವಸ್ಥಗೊಂಡಿದ್ದಳು. ಬಳಿಕ ಆರೋಪಿ ಅಲ್ಲೇ ಇದ್ದ ಕಲ್ಲಿನಿಂದ ಆಕೆಯ ಮುಖ ಹಾಗೂ ದೇಹದ ಇತರ ಭಾಗಗಳ  ಮೇಲೆ ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದ್ದ. ಮತ್ತೂಂದೆಡೆ ಸಂತ್ರಸ್ತೆಯ ಇಡೀ ಕುಟುಂಬ ಸದಸ್ಯರು ಎಲ್ಲೆಡೆ ಹುಡುಕಾಟ ನಡೆಸಿದರೂ ಎಲ್ಲಿಯೂ ಪತ್ತೆಯಾಗಿರಲಿಲ್ಲ.

Advertisement

ಎ.3ರಂದು ಬೆಳಗ್ಗೆ ನಿರ್ಮಾಣ ಹಂತದ ಕಟ್ಟಡದ ಕೆಲಸಕ್ಕೆ ಬಂದ ಕಾರ್ಮಿಕರು, ಮಹಿಳೆಯ ಶವಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.  ಶವ ಪತ್ತೆಯಾದ ವಿಚಾರ ತಿಳಿದು ಸಂತ್ರಸ್ತೆ ಕುಟುಂಬದವರೂ ಆಗಮಿಸಿದ್ದರು. ಮಹಿಳೆಯ ಶವ ನಗ್ನ ಸ್ಥಿತಿಯಲ್ಲಿತ್ತು. ದೇಹದ ವಿವಿಧ ಭಾಗದ ಮೇಲೆ ರಕ್ತ ಗಾಯಗಳಾಗಿತ್ತು. ಅನಂತರ ಕುಟುಂಬ ಸದಸ್ಯರು ಮೃತರ ಗುರುತು ಪತ್ತೆ ಹಚ್ಚಿದ್ದರು.

 

 

Advertisement

Udayavani is now on Telegram. Click here to join our channel and stay updated with the latest news.

Next