Advertisement

ಸಾಮಾಜಿಕ ಕಾರ್ಯಚಟುವಟಿಕೆಯಿಂದ ಹೆಸರುವಾಸಿಯಾದ ಸಂಘ

12:32 AM Feb 19, 2020 | mahesh |

ಪಡುಮಾರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದಲ್ಲಿ ಆರಂಭದಲ್ಲಿ 100 ಲೀ,. ಹಾಲು ಸಂಗ್ರಹವಾಗುತ್ತಿತ್ತು. ಇಂದು ಪಡುಮಾರ್ನಾಡು, ಮೂಡುಮಾರ್ನಾಡು ಗ್ರಾಮಗಳ ವ್ಯಾಪ್ತಿಯಲ್ಲಿ 800 ಲೀ. ಹಾಲು ಸಂಗ್ರಹವಾಗುತ್ತಿದೆ.

Advertisement

ಮೂಡುಬಿದಿರೆ: ಪಡು ಮಾರ್ನಾಡು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ, ದರೆಗುಡ್ಡೆ, ಬೆಳುವಾಯಿ, ಕಾಂತಾವರ ಈ ಆರು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿಕೊಂಡು 1967ರಲ್ಲಿ ಕ್ಷೀರಸಾಗರ ಹಾಲು ಉತ್ಪಾದಕರ ಸಹಕಾರ ಸಂಘ ಎಂಬ ಹೆಸರಿನಿಂದ ಪ್ರಾರಂಭವಾಗಿ ಕುಲಶೇಖರದ ಸರಕಾರಿ ಡೈರಿಗೆ ಹಾಲನ್ನು ಪೂರೈಸಲಾಗುತ್ತಿತ್ತು.

ಮುಂದೆ 2000ನೇ ಇಸವಿ ಮಾರ್ಚ್‌ 31ರಂದು ಈ ಸಂಘ ವನ್ನು ಪಡುಮಾರ್ನಾಡು ಮತ್ತು ಮೂಡುಮಾರ್ನಾಡು ಗ್ರಾಮಗಳಿಗೆ ಸೀಮಿತಗೊಳಿಸಿ ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಸಂಯೋಜಿಸಿಕೊಂಡು ಪಡುಮಾರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘ ಎಂಬ ಹೊಸ ಹೆಸರಿನೊಂದಿಗೆ ನೋಂದಾ ಯಿಸಲ್ಪಟ್ಟಿತು.

ಆರು ಗ್ರಾಮಗಳಿದ್ದಾಗ 348 ಸದಸ್ಯರಿದ್ದರೆ, ಪ್ರಸ್ತುತ ಎರಡು ಗ್ರಾಮಗಳ 295 ಸದಸ್ಯರಿದ್ದಾರೆ. ಆರಂಭದಲ್ಲಿ 100 ಲೀ,. ಹಾಲು ಸಂಗ್ರಹವಾಗುತ್ತಿತ್ತು. (ಬೆಳುವಾಯಿ, ಕಾಂತಾವರ, ದರೆಗುಡ್ಡೆ, ಕೆಲ್ಲಪುತ್ತಿಗೆ ಈ ನಾಲ್ಕು ಗ್ರಾಮಗಳಲ್ಲಿ, ಹೈನುಗಾರರ ಕೋರಿಕೆಯಂತೆ ಆಯಾ ಗ್ರಾಮಗಳಲ್ಲೇ ಹೊಸದಾಗಿ ಸಹಕಾರ ಸಂಘಗಳ ಸ್ಥಾಪನೆಯಾಗಿದೆ.) ಸದ್ಯ ಪಡು ಮಾರ್ನಾಡು, ಮೂಡುಮಾರ್ನಾಡು ಗ್ರಾಮಗಳ ವ್ಯಾಪ್ತಿಯಲ್ಲಿ 800 ಲೀ. ಹಾಲು ಸಂಗ್ರಹ ವಾಗುತ್ತಿದೆ.

ಪ್ರಾರಂಭದಲ್ಲಿ ಬಾಡಿಗೆ ಕಟ್ಟಡದಲ್ಲಿ ಸಂಘವು ಕಾರ್ಯನಿರ್ವಹಿಸುತ್ತಿದ್ದರೆ ಪ್ರಕೃತ ಪಡುಮಾರ್ನಾಡು ಗ್ರಾಮದ ಬನ್ನಡ್ಕದಲ್ಲಿ ಸರಕಾರದಿಂದ 4 ಸೆಂಟ್ಸ್‌ ಜಾಗ ಖರೀದಿಸಿ ಸ್ವಂತ ಕಟ್ಟಡ ನಿರ್ಮಿಸಲಾಗಿದೆ.

Advertisement

“ಸಂಘದ ಸದಸ್ಯರು, ನಿರ್ದೇಶಕರು, ಸಿಬಂದಿ ಹಾಗೂ ಒಕ್ಕೂಟದ ಸಹಕಾರದಿಂದ ಸಂಘವು ಉತ್ತಮವಾಗಿ ನಡೆದುಕೊಂಡು ಬರುತ್ತಿದೆ. ಪರಿಸರದ ಗ್ರಾಮಗಳಿಂದ ವಾಹನ ಮೂಲಕ ಹಾಲು ಸಂಗ್ರಹಿಸುವ ವ್ಯವಸ್ಥೆ ಮಾಡುವ, ಅಮನೊಟ್ಟು ಶಾಖೆಯನ್ನು ತೆರೆಯುವ ಯೋಜನೆ ಇದೆ’.
– ಎಂ. ದಯಾನಂದ ಪೈ, ಅಧ್ಯಕ್ಷರು, ಪಡುಮಾರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘ ನಿ.

ಸೌಕರ್ಯಗಳು
ಪರಿಶಿಷ್ಟ ಜಾತಿ/ಪಂಗಡದವರಿಗೆ ಉತ್ತಮ ತಳಿಯ ಕರುಗಳನ್ನು ಸರಕಾರದ ಸಹಾಯಧನದೊಂದಿಗೆ ಸಂಘದ ವತಿಯಿಂದ ಉಚಿತವಾಗಿ ನೀಡಲಾಗಿದೆ. ಕರು ಸಾಕಾಣಿಕೆಗೆ ಉಚಿತವಾಗಿ ಪಶುಆಹಾರ ಒದಗಿಸಲಾಗುತ್ತಿದೆ. ವಿಶೇಷ ತಜ್ಞ ಪಶುವೈದ್ಯರ ಸಹಕಾರದಿಂದ ದನಗಳ ಬಂಜೆತನ ನಿವಾರಣ ಶಿಬಿರ, ಕಾಲು ಬಾಯಿ ಜ್ವರ ನಿಯಂತ್ರಣ ಶಿಬಿರ, ಶುದ್ಧ ಹಾಲು ಉತ್ಪಾದನ ಶಿಬಿರ, ಹೈನುಗಾರಿಕಾ ಮಾಹಿತಿ ಶಿಬಿರ ಏರ್ಪಡಿಸಲಾಗುತ್ತಿದೆ. ಜಾನುವಾರುಗಳ ಜಂತು ಹುಳಕ್ಕೆ ಸಂಘದಿಂದ ಉಚಿತವಾಗಿ ಔಷಧಿ ನೀಡಲಾಗುತ್ತಿದೆ. ಒಕ್ಕೂಟ ಮತ್ತು ಸಂಘದ ಸಹಭಾಗಿತ್ವದಲ್ಲಿ ಜಾನುವಾರು ವಿಮೆ, ಸದಸ್ಯರಿಗೆ ಸಹಾಯಧನ ಹೀಗೆ ಸದಸ್ಯ ಹೈನುಗಾರರನ್ನು ವಿವಿಧ ರೀತಿಯಲ್ಲಿ ಪ್ರೋತ್ಸಾಹಿಸಲಾಗುತ್ತಿದೆ. ಊರಿನ ಧಾರ್ಮಿಕ, ಶೈಕ್ಷಣಿಕ ರಂಗಗಳಿಗೂ ಸಂಘದ ವತಿಯಿಂದ ಸಹಾಯಧನ ನೀಡಲಾಗುತ್ತಿದೆ.

ಅಧ್ಯಕ್ಷರು
ಅಧ್ಯಕ್ಷರಾಗಿ ಎಂ. ದಯಾನಂದ ಪೈ, ಎಸ್‌.ಎ. ಸಾಲಿನ್ಸ್‌ , ಸಿಲ್ವಿಯಾ ಜೇಮ್ಸ್‌, ಎಂ. ದಯಾನಂದ ಪೈ, ಕೆ. ನಾರಾಯಣ ಶೆಟ್ಟಿ ಕೇಂಪುಲು, ಎಂ. ಸುಂದರನಾಥ ಭಂಡಾರಿ, ಬಿ. ಶೇಷಗಿರಿ ಕಾಮತ್‌ ಸೇವೆ ಸಲ್ಲಿಸಿದ್ದು ಇದೀಗ ಮೂರನೇ ಬಾರಿಗೆ ಪಡುಮಾರ್ನಾಡು ಹಾ. ಉ. ಸಹಕಾರ ಸಂಘ ಅಧ್ಯಕ್ಷರಾಗಿ ಎಂ. ದಯಾನಂದ ಪೈ ಆರಿಸಲ್ಪಟ್ಟಿದ್ದಾರೆ.

ಕಾರ್ಯದರ್ಶಿಗಳು
ಕಾರ್ಯದರ್ಶಿಗಳಾಗಿ ರೋಸ್‌ ಸಿ. ಮಾಬೆನ್‌, ಶಾಂತಿ ಭಟ್‌, ಸತೀಶ ಭಟ್‌, ಉಮಾವತಿ, ವಸಂತಿ ಹಾಗೂ ಉಮಾವತಿ ಸೇವೆ ಸಲ್ಲಿಸುತ್ತಿದ್ದಾರೆ.

-  ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next