Advertisement

Kundapura: ಬೈಕ್‌ ಸವಾರರ ನಿದ್ದೆ ಕೆಡಿಸಿದ ಸರ್ವಿಸ್‌ ರಸ್ತೆ ಗುಂಡಿ

02:28 PM Aug 08, 2024 | Team Udayavani |

ಕುಂದಾಪುರ: ಕುಂದಾಪುರದ ಫ್ಲೈಓವರ್ ಅಂಡರ್‌ಪಾಸ್‌ ದಾಟಿ ಉಡುಪಿ ಕಡೆಗೆ ಮುಂದುವರಿಯುವಾಗ ಹೋಟೆಲ್‌ ದಿವ್ಯಲಕ್ಷ್ಮೀ  ಸಮೀಪ ಶ್ರೀದೇವಿ ನರ್ಸಿಂಗ್‌ ಹೋಂ ರಸ್ತೆಗಿಂತ ಮುಂದೆ ಹಾದು ಹೋಗುವ ಸರ್ವಿಸ್‌ ರಸ್ತೆಯಲ್ಲಿ ಬೃಹತ್‌ ಹೊಂಡ ನಿರ್ಮಾಣಗೊಂಡಿದೆ. ಅದರಲ್ಲಿ ಮಳೆ ನೀರು ನಿಂತು ಹೊಂಡ ಗಮನಕ್ಕೆ ಬಾರದೆ ತುಂಬಾ ಜನ ಬೈಕ್‌ ಸವಾರರು ಹೊಂಡದಲ್ಲಿ ಬಿದ್ದಿರುವ ಘಟನೆ ನಡೆಯುತ್ತಿದೆ. ಯಾವುದಾದರೂ ಪ್ರಾಣ ಹಾನಿ ಸಂಭವಿಸುವ ಮೊದಲೇ ಸಂಬಂಧಿತ ಪ್ರಾಧಿಕಾರ ತುರ್ತು ಗಮನ ವಹಿಸಿ ಇದರ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಇದೇ ರೀತಿಯ ಅನೇಕ ಗುಂಡಿಗಳು ಹಲವೆಡೆ ಇದ್ದು ಇದರ ಬಗ್ಗೆ ಸಂಬಂಧಿತ ಇಲಾಖೆ ಸರಿಪಡಿಸುವಲ್ಲಿ ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ದಿನನಿತ್ಯ ವಾಹನದಲ್ಲಿ ಓಡಾಡುವ ವಾಹನ ಚಾಲಕರಿಗೆ ಸಮರ್ಪಕವಾದ ರಸ್ತೆ ನಿರ್ಮಿಸಿಕೊಡುವುದು ಸಂಬಂಧಿತ ಪ್ರಾ ಧಿಕಾರದ ಆದ್ಯ ಕರ್ತವ್ಯವಾಗಿದೆ. ಆದರೆ ಇಲ್ಲಿ ಸುಂಕ ಸಂಗ್ರಹವಷ್ಟೇ ತಮ್ಮ ಕೆಲಸ ಎಂದು ಭಾವಿಸಿದಂತಿದೆ.

ಆಕಸ್ಮಿಕವಾಗಿ ನಡೆಯುವ ಅವ ಘಡಗಳನ್ನು ತಪ್ಪಿಸುವಲ್ಲಿ ಆಡಳಿತ ಸಹಾಯ ಮಾಡಬೇಕಾಗುತ್ತದೆ. ಕುಂದಾಪುರದ ಸರ್ವಿಸ್‌ ರಸ್ತೆಯಲ್ಲಿ ಬೈಕ್‌ ಸವಾರರಿಗೆ ತೆರೆದ ಗುಂಡಿಗಳು ತಲೆನೋವಾಗಿ ಪರಿಣಮಿಸಿದೆ. ಮೃತ್ಯುವಿಗೆ ಆಹ್ವಾನ ನೀಡಿದಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next