Advertisement

ರಸ್ತೆ ಅಪಘಾತ ಒಂದೇ ಕುಟುಂಬದ 7 ಜನ ಸಾವು

11:03 PM Jul 31, 2019 | Team Udayavani |

ಧಾರವಾಡ/ಬೆಳಗಾವಿ: ಮಹಾರಾಷ್ಟ್ರದ ಸತಾರದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಹಜ್‌ ಯಾತ್ರೆಗೆ ತೆರಳುತ್ತಿದ್ದ ಧಾರವಾಡದ ಒಂದೇ ಕುಟುಂಬ ಮೂರು ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ.

Advertisement

ಇಲ್ಲಿನ ಮದಿಹಾಳ ನಿವಾಸಿಗಳಾದ ನಿಜಾಮುದ್ದೀನ ಸೌದಾಗರ (65), ಪತ್ನಿ ಸಪೂರಾ ಬೇಗಂ (58), ಪುತ್ರ ಮನ್ಸೂಬ್‌ ಅಲಿ (35), ಸೊಸೆ ನಫೀಜಾ (33), ಮೊಮ್ಮಕ್ಕ ಳಾದ ಗುಲಾ°ರ್‌ (6), ತೈಬಾ (4) ಹಾಗೂ ಅಹ್ಮದ ರೈಜಾ (2) ಮೃತರು. ಸತಾರ ಬಳಿ ತಡ ರಾತ್ರಿ 1 ಗಂಟೆ ಸುಮಾ ರಿಗೆ ಚಾಲ ಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗಿಡಕ್ಕೆ ಕಾರು ಡಿಕ್ಕಿ ಹೊಡೆ ದ ರಭಸಕ್ಕೆ ಎಲ್ಲರೂ ಮೃತಪಟ್ಟಿದ್ದು, ಕಾರು ಚಾಲಕ ಸೈಯ ಬಾಜಾ ಸ್ಥಿತಿ ಚಿಂತಾಜನಕವಾಗಿದೆ.

ನಿಜಾಮುದ್ದೀನ ಪತ್ನಿ ಸಪೂರಾಬೇಗಂ ಜೊತೆ ಹಜ್‌ ಯಾತ್ರೆ ಕೈಗೊಂಡಿದ್ದರು. ಅದಕ್ಕಾಗಿ ಆ.1ರಂದು ಹಜ್‌ಗೆ ಮುಂಬೈ ಮೂಲಕ ವಿಮಾನ ಹತ್ತಬೇಕಿತ್ತು. ಸಪೂರಾಬೇಗಂ ಅವರಿಗೆ ಕಾಲು ನೋವಿದ್ದ ಕಾರಣ ಮಗ ಮನ್ಸೂಬ್‌ ಅಲಿ ಮಹೀಂದ್ರಾ ಎಸ್‌ ಯುವಿ ಕಾರು ಮಾಡಿಕೊಂಡು ಕುಟುಂಬ ಸಮೇತ ಅವರನ್ನು ವಿಮಾನ ಹತ್ತಿಸಿ ಬರಲು ಮುಂಬೈಗೆ ಪ್ರಯಾಣ ಬೆಳೆಸಿದ್ದರು. ತಂದೆ-ತಾಯಿಯನ್ನು ಬಿಡಲು ಮಗನ ಜೊತೆ ಪತ್ನಿ, ಮೂರು ಮೊಮ್ಮಕ್ಕಳು ಹೋಗಿದ್ದಾಗ ಈ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next