Advertisement

ಲಂಚ ಸ್ವೀಕಾರದ ವೇಳೆ ಎಸಿಬಿ ಬಲೆಗೆ ಬಿದ್ದ ಪೊಲೀಸ್‌ ಅಧಿಕಾರಿ

09:07 PM Jul 08, 2020 | Sriram |

ಮೈಸೂರು: ನಗರದ ಮೇಟಗಳ್ಳಿ ಠಾಣೆ ಇನ್ಸ್‌ಪೆಕ್ಟರ್‌ ರಾಘವೇಂದ್ರ ಮತ್ತು ಪೇದೆ ಭೀಮಣ್ಣ ಅತ್ಯಾಚಾರ ಸಂತ್ರಸ್ತೆಯೊಬ್ಬರಿಂದ 75 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಬುಧವಾರ ಸಂಜೆ ಇಲ್ಲಿನ ಖಾಸಗಿ ವಸತಿಗೃಹವೊಂದರಲ್ಲಿ ಹಣ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಇಬ್ಬರನ್ನೂ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಅತ್ಯಾಚಾರ ನಡೆಸಿದ್ದ ಆರೋಪಿಯನ್ನು ಬಂಧಿಸಲು ಮೊದಲಿಗೆ ಇನ್ಸ್‌ಪೆಕ್ಟರ್‌ ರಾಘವೇಂದ್ರ 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಸಂತ್ರಸ್ತೆ ಹಣ ನೀಡಲಿಲ್ಲ. ನಂತರ, ಆರೋಪಿಯು ಜಾಮೀನು ತೆಗೆದುಕೊಂಡ. ದೋಷಾರೋಪ ಪಟ್ಟಿಯಲ್ಲಿ ಕಠಿಣವಾದ ಸೆಕ್ಷನ್‌ಗಳನ್ನು ಹಾಕಬೇಕಾದರೆ ಹಣ ನೀಡಲೇಬೇಕು ಎಂದು ರಾಘವೇಂದ್ರ ಹಾಗೂ ಭೀಮಣ್ಣ ಮೂಲಕ ಬೇಡಿಕೆ ಇಟ್ಟಿದ್ದಾರೆ.

ಈ ಹಂತದಲ್ಲಿ ಎಸಿಬಿ ಗಮನಕ್ಕೆ ವಿಷಯ ತಂದ ಸಂತ್ರಸ್ತೆ 75 ಸಾವಿರ ಹಣವನ್ನು ಖಾಸಗಿ ವಸತಿ ಗೃಹವೊಂದರಲ್ಲಿ ನೀಡುವಾಗ ಎಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next