Advertisement

ಕ್ಷಯ ರೋಗದ ಪತ್ತೆ ಮಾಡುವಿಕೆ ಮತ್ತು ಚಿಕಿತ್ಸೆಯ ಹೊಸ ಮಾರ್ಗದರ್ಶಿ

06:15 AM Apr 01, 2018 | |

ಹಿಂದಿನ ವಾರದಿಂದ-  ಕ್ಷಯ ರೋಗದ ಚಿಕಿತ್ಸೆಯ ಬಗೆಗಳು

Advertisement

1. CBNAAT (GENE X PERT)  ಫ‌ಲಿತಾಂಶದಲ್ಲಿ ಕಫ‌ ಅಥವಾ ದೇಹದ ಇತರ ಯಾವುದೇ ಮಾದರಿಯಲ್ಲಿ ಸೂಕ್ಷ್ಮಾಣುಗಳು ಇವೆ ಮತ್ತು  RIFAMPICIN SENSITIVE ಅಂತಿದ್ದರೆ ಆ ರೋಗಿಗೆ CATEGORY I (ONE)   ಚಿಕಿತ್ಸೆ  (2 ತಿಂಗಳು ದಿನಂಪ್ರತಿ HREZ  ಮಾತ್ರೆಗಳು ಅನಂತರ 4 ತಿಂಗಳು ದಿನಂಪ್ರತಿ HRE  ಮಾತ್ರೆಗಳು) ಪ್ರಾರಂಭಿಸುವುದು. 

ಕಫ‌ ಪರೀಕ್ಷೆ ಆಧಾರದ ಮೇಲೆ ಈ ಮೊದಲೇ ಈ ಚಿಕಿತ್ಸೆ ಆರಂಭಿಸಿದ್ದರೆ ಅದನ್ನೇ 6 ತಿಂಗಳ ಕೊನೆಗೆ ಹಾಗೂ 6 ತಿಂಗಳ ಕೂಸಿಗೆ MICROSCOPY  ಮೂಲಕ ಕಫ‌ ಪರೀಕ್ಷೆ ಮಾಡಿಸಿ ಅದರಲ್ಲಿ ಸೂಕ್ಷ್ಮಾಣುಗಳು ಇಲ್ಲ ಎಂಬ ಫ‌ಲಿತಾಂಶ ಬಂದಲ್ಲಿ ರೋಗಿಯು ಕ್ಷಯ ರೋಗ ಮುಕ್ತ ಎಂದು ಪರಿಗಣಿಸಿ ಆರು ತಿಂಗಳ ಕೊನೆಗೆ ಚಿಕಿತ್ಸೆಯಿಂದ ಬಿಡುಗಡೆಗೊಳಿಸುವುದು.

2. CBNAAT ಫ‌ಲಿತಾಂಶ RIFAMPICIN RESISTANCE ಎಂದು ಕಂಡುಬಂದರೆ ಆ ರೋಗಿಯು DRUG RESISTANT TUBERCULOSIS  ನಿಂದ ಬಳಲುತ್ತಿದ್ದಾರೆ ಎಂದು ಪರಿಗಣಿಸಬೇಕಾಗುವುದು. ಅಲ್ಲದೆ ಅವರಿಗೆ ಕೂಡಲೇ ಸಾಂಪ್ರದಾಯಿಕವಾಗಿ ನೀಡುವ ಕಡಿಮೆ ಸಮಯದ (9-11 ತಿಂಗಳು) ಚಿಕಿತ್ಸೆ ತಾತ್ಕಾಲಿಕವಾಗಿ ಪ್ರಾರಂಭಿಸಬೇಕು. RIFAMPICINE RESISTANCE ಫ‌ಲಿತಾಂಶ ಬಂದ ಕೂಡಲೇ CBNAAT ಪ್ರಯೋಗಾಲಯದಿಂದ ಈ ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಈಖಖ DST-CULTURE   ಪ್ರಯೋಗಾಲಯಕ್ಕೆ ಕಳಿಸಲಾಗುತ್ತದೆ. ಅಂತಹ ಪ್ರಯೋಗಾಲಯಗಳು ನಮ್ಮ ರಾಜ್ಯದಲ್ಲಿ ಕೇವಲ ಬೆಂಗಳೂರು ಹುಬ್ಬಳ್ಳಿ ರಾಯಚೂರಿನಲ್ಲಿವೆ. ಅಲ್ಲಿ ಆ ರೋಗಿಯು ಮಾದರಿಯನ್ನು ಕ್ಷಯರೋಗದ Second Line  ಔಷಧಗಳನ್ನು Line Probeassay  ಮೂಲಕ ಔಷಧ  Sensitivity ಪತ್ತೆ ಹಚ್ಚಿ ಆ ರೋಗಿಗೆ ಸೂಕ್ತವಾದ DR-TB ಚಿಕಿತ್ಸಾ Regemen ಸೂಚಿಸಲಾಗುತ್ತದೆ. 

ಅದರಂತೆ ರೋಗಿಗೆ ಒಂದು ವರ್ಷದಿಂದ 2 ವರ್ಷಕ್ಕೂ ಅಧಿಕವಾದ ದೀರ್ಘ‌ಕಾಲೀನ ಚಿಕಿತ್ಸೆ ಪಡೆಯಬೇಕಾಗಬಹುದು. 
ರೋಗಿಯು ಈ ಚಿಕಿತ್ಸೆಯನ್ನು ಕೆಲವು ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಿರುವ/ಸ್ಥಾಪಿಸುತ್ತಿರುವ DR-TB CENTRE ಗಳಲ್ಲಿ ಉಚಿತವಾಗಿ ಪಡೆಯಬಹುದು.

Advertisement

ಈ ಎಲ್ಲಾ ಪರೀಕ್ಷೆಗಳು, ಚಿಕಿತ್ಸೆಗಳು ಯಾವುದೇ ರೋಗಿಗೆ ಉಚಿತವಾಗಿದ್ದು ರೋಗಿಗೆ ತಿಂಗಳ ಮಾಸಾಶನದೊಂದಿಗೆ ಚಿಕಿತ್ಸಾ ಕೇಂದ್ರಗಳಿಗೆ ಪ್ರಯಾಣಿಸಲು ಪ್ರಯಾಣ ಭತ್ತೆಯನ್ನು ಸಹ ನೀಡಲಾಗುತ್ತದೆ.

ಯಾವುದೇ ಖಾಸಗೀ ವೈದ್ಯರುಗಳು ಕೂಡ ತಮ್ಮ ರೋಗಿಗಳಿಗಾಗಿ ಈ Diagnostic Servicesಗಳನ್ನು ಉಚಿತವಾಗಿ ಬಳಸಿಕೊಳ್ಳಬಹುದಾಗಿದ್ದು ಸಂಬಂಧಪಟ್ಟ ಔಷಧಗಳನ್ನು ಸಹ ಉಚಿತವಾಗಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಿಂದ ಪಡೆದುಕೊಂಡು ತಮ್ಮ ಆಸ್ಪತ್ರೆಗಳಲ್ಲಿ ಸಹ ಸೂಕ್ತ ಕಾಯಿಲೆ ಹರಡುವ ನಿರೋಧಕ ಕ್ರಮಗಳನ್ನು ಅನುಸರಿಸಿ ನೀಡಬಹುದಾಗಿದೆ. ಚಿಕಿತ್ಸೆ ನೀಡುವ ಪ್ರತೀ ಖಾಸಗಿ ವೈದ್ಯರಿಗೆ ಸಹ ಪ್ರೋತ್ಸಾಹ ಧನ ನೀಡಲಾಗುತ್ತದೆ. ಈಗ ಪ್ರತೀ ವೈದ್ಯರು (ಖಾಸಗಿ ಮತ್ತು ಸರಕಾರಿ) ಕ್ಷಯ ರೋಗವನ್ನು ಪತ್ತೆ ಹಚ್ಚಿದ ಕೂಡಲೇ ಅದರ ಮಾಹಿತಿಯನ್ನು ಆರೋಗ್ಯ ಇಲಾಖೆಗೆ TB Notification-Resporting Format ಮೂಲಕ ನೀಡುವುದು ಅಗತ್ಯವಾಗಿದೆ. Computer ಅಥವಾ Smart Phone ಇರುವವರು.NIKSHAY ಎಂಬ Software  ಉಪಯೋಗಿಸಿ ಆ ಮೂಲಕ Notification  ಮಾಡಬಹುದಾಗಿದೆ. ಹೀಗೆ ಮಾಡಿದ ಪ್ರತೀ ರೋಗಿಯ ಮಾಹಿತಿಗೆ ಸರಕಾರದಿಂದ ಪ್ರೋತ್ಸಾಹ ಧನ ಮತ್ತು ಆ ರೋಗಿಯ ಚಿಕಿತ್ಸೆಗೆ ಉಚಿತ ಔಷಧ ಸಹ ಇಲಾಖೆಯಿಂದ ನೀಡಲಾಗುವುದು. ವೈದ್ಯರು ಇಲಾಖೆಗೆ ಹೀಗೆ Notification ಮಾಡಿದ ನಂತರ ಇಲಾಖೆಯ ಕಾರ್ಯಕರ್ತರು ರೋಗಿ ನಿಗದಿತ ಸಮಯದವರೆಗೆ ಈ ಚಿಕಿತ್ಸೆ  ಪಡೆದುಕೊಂಡು ರೋಗದಿಂದ ಗುಣಮುಖರಾಗುವುದನ್ನು ಖಾತರಿಪಡಿಸಿಕೊಳ್ಳುತ್ತಾರೆ. 

ರೋಗ ಚಿಕಿತ್ಸೆ ಪತ್ತೆ ಹಚ್ಚಲು 
ಹಾಗೂ ಚಿಕಿತ್ಸೆಗೆ ಸಂಬಂಧಪಟ್ಟ ಯಾವುದೇ ಮಾಹಿತಿಗಾಗಿ ಆಯಾ ಜಿಲ್ಲೆಯಲ್ಲಿರುವ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ PPM COORDINATOR, ಕ್ಷಯ ರೋಗ ಚಿಕಿತ್ಸಾ ಮೇಲ್ವಿಚಾರಕರು ಹಾಗೂ ಕ್ಷಯ ರೋಗ ಆರೋಗ್ಯ ವೀಕ್ಷಕರಿಂದ ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next