Advertisement

ಸಂಸದ ಮುನಿಯಪ್ಪ ವಿರುದ್ಧ ದಲಿತ ಮುಖಂಡರ ಸಭೆ

06:40 AM Oct 01, 2018 | Team Udayavani |

ಬೆಂಗಳೂರು: ಕೋಲಾರ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ವಿರುದ್ಧ ಸ್ಥಳೀಯ ದಲಿತ ಮುಖಂಡರು ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ನಗರದ ಖಾಸಗಿ ಹೊಟೇಲ್‌ನಲ್ಲಿ ಭಾನುವಾರ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ದಲಿತ ನಾಯಕರು ಸಭೆ ನಡೆಸಿ, ಕೆ.ಎಚ್‌. ಮುನಿಯಪ್ಪ 27 ವರ್ಷಗಳಿಂದ ಲೋಕಸಭೆ ಸದಸ್ಯರಾಗಿದ್ದರೂ, ದಲಿತ ಸಮುದಾಯಕ್ಕೆ ಯಾವುದೇ ಅನುಕೂಲ ಮಾಡಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮುನಿಯಪ್ಪ ಅವರನ್ನು ಸೋಲಿಸಲು ಮುನಿಯಪ್ಪ ಹಠಾವೋ ಕೋಲಾರ ಬಚಾವೊ ಎಂಬ ಘೋಷ ವಾಕ್ಯದಡಿ ಕಾರ್ಯತಂತ್ರ ರೂಪಿಸಲು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಹೇಳಲಾಗಿದೆ. ಮುಖಂಡರಾದ ಸಿ.ಎಂ. ಮುನಿಯಪ್ಪ, ಟಿ. ವಿಜಯಕುಮಾರ್‌, ಬಾಲಾಜಿ ಚೆನ್ನಯ್ಯ, ಜೆ. ಶ್ರೀನಿವಾಸ್‌, ಎಂ.ಶ್ರೀನಿವಾಸನ್‌ ಹಾಜರಿದ್ದರು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next