Advertisement

ಇನ್ನೂ ಪತ್ತೆಯಾಗದ ಓರ್ವ ಮೀನುಗಾರ

07:31 AM Dec 05, 2020 | mahesh |

ಮಂಗಳೂರು: ಕಳೆದ ಸೋಮವಾರ ರಾತ್ರಿ ಮಂಗಳೂರು ದಕ್ಕೆಯಿಂದ ಸುಮಾರು 12 ನಾಟಿಕಲ್‌ ಮೈಲು ದೂರದಲ್ಲಿ ಮುಳುಗಿದ ಶ್ರೀರಕ್ಷಾ ದೋಣಿಯಲ್ಲಿದ್ದ ಮೀನುಗಾರರ ಪೈಕಿ ಇನ್ನೂ ನಾಪತ್ತೆಯಾಗಿರುವ ಕಸ್ಬಾ ಬೆಂಗ್ರೆಯ ಅನ್ಸಾರ್‌ (31) ಅವರಿಗಾಗಿ ಹುಡುಕಾಟ ಮುಂದುವರಿದಿದೆ.

Advertisement

ನೀರಿನಡಿಯಲ್ಲಿರುವ ದೋಣಿ ಯನ್ನು ಈಗಾಗಲೇ ಒಂದಷ್ಟು ದೂರಕ್ಕೆ ಸರಿಸಲಾಗಿದೆ. ಆದರೆ ಅದರ ಅಡಿಯಲ್ಲಿ ಮಾನವ ದೇಹಕ್ಕೆ ಸಂಬಂಧಿಸಿ ಯಾವುದೇ ಕುರುತು ಪತ್ತೆಯಾಗಿಲ್ಲ. ಹಾಗಾಗಿ ಸದ್ಯಕ್ಕೆ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

ಪೊಲೀಸ್‌ ನಿಗಾ
ಕರಾವಳಿ ಕಾವಲು ಎಸ್‌ಪಿ ಆರ್‌.ಚೇತನ್‌ ಅವರ ನಿರ್ದೇಶನದಂತೆ ಕಳೆದೆರಡು ದಿನಗಳಿಂದ ಪರ್ಶಿನ್‌ ಮೀನುಗಾರರ ಜತೆಗೆ ಕಾರ್ಯಾಚರಣೆ ನಡೆಸಿದ್ದ ಕರಾವಳಿ ಕಾವಲು ಪೊಲೀಸರು ಶುಕ್ರವಾರ ಆ ಪ್ರದೇಶದ ಸುಮಾರು 8.ಕಿ.ಮೀ ಸುತ್ತಳತೆಯಲ್ಲಿ ನಿಗಾ ವಹಿಸಿದರು. ಕರಾವಳಿ ಕಾವಲು ಪೊಲೀಸ್‌ನ ಕರಾವಳಿ ನಿಯಂತ್ರಣ ದಳ ತೀರದುದ್ದಕ್ಕೂ ವಿಶೇಷ ನಿಗಾ ವಹಿಸಲಿದೆ ಎಂದು ಕರಾವಳಿ ಕಾವಲು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next