Advertisement

Bajpe ಅಂಗಡಿಯ ಮುಂದೆ ಮಲಗಿದ್ದ ದನ ಕಳವು

11:42 PM Aug 16, 2023 | Team Udayavani |

ಕೈಕಂಬ: ಮಿಜಾರಿನ ಬೈತರಿಯ ಚಂದ್ರೇಗೌಡರ ಮನೆಯ ಮೇಯಲು ಹೋಗಿದ್ದ ಮೂರು ದನಗಳಲ್ಲಿ ಒಂದು ದನ ಆ. 14ರಂದು ಮನೆಗೆ ಬಾರದೇ ಇದ್ದುದರಿಂದ ಆ. 15ರಂದು ಬಡಗಡಪದವು ಧೂಮಚಡವಿನ ಆಟೋ ರಿಕ್ಷಾ ಪಾರ್ಕ್‌ ಬಳಿ ಹುಡುಕಾಟ ನಡೆಸುವ ಸಂದರ್ಭದಲ್ಲಿ ದೇವಾನಂದ ಅವರ ಅಂಗಡಿಯ ಸಿಸಿ ಕೆಮರಾ ಪರಿಶೀಲಿಸಿದಾಗ ಯಾರೋ ಕಳ್ಳರು ಅಂಗಡಿಯ ಮುಂದೆ ಮಲಗಿದ್ದ ದನಗಳನ್ನು ಕಳವು ಮಾಡಿ ಕಾರಿನಲ್ಲಿ ತುಂಬಿಸಿದ್ದು ಕಂಡು ಬಂದಿತ್ತು.

Advertisement

ಚಂದ್ರೇಗೌಡರ ಮನೆಯ ಒಂದು ಗಂಡು ಕರು ಕಂಡುಬಂದಿದೆ .ಪರಿಸರ ವಾಸಿಗಳ 2 ದನಗಳು ಕಾರ್‌ನಲ್ಲಿ ತುಂಬಿಸಿರುವುದೂ ಕಂಡುಬಂದಿದೆ. ಈ ಬಗ್ಗೆ ಬಜಪೆ ಪೊಲೀಸ್‌ ಠಾಣೆಯಲ್ಲಿ ಚಂದ್ರೇಗೌಡರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next