Advertisement

ಉದ್ಯಮಿಗೆ ವಂಚನೆ ಪ್ರಕರಣ : ಕನ್ನಡ ನಿರ್ಮಾಪಕನಿಗೆ ಒಂದು ವರ್ಷ ಶಿಕ್ಷೆ

03:32 PM Aug 01, 2021 | Team Udayavani |

ಹಾಸನ: ಕನ್ನಡ ಸಿನಿಮಾ ನಿರ್ಮಾಪಕ ಕೆ. ಸುಧಾಕರ್ ವಂಚನೆ ಆರೋಪದಡಿ ​ ಐದು ಕೋಟಿ ಪರಿಹಾರ ನೀಡುವುದರ ಜತೆಗೆ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

Advertisement

ಏನಿದು ಪ್ರಕರಣ ?

ಹಾಸನದ ಉದ್ಯಮಿಯೋರ್ವನಿಂದ ಸಾಲವಾಗಿ 2.90 ಕೋಟಿ ರೂ. ಪಡೆದಿದ್ದರು. ನಿಗಧಿತ ಸಮಯದಲ್ಲಿ ಹಣ ವಾಪಸ್ ಮಾಡದ ಸುಧಾಕರ್​  ಸತಾಯಿಸಿದ್ದರು. ಕೊನೆಗೆ ಈ ಪ್ರಕರಣದಲ್ಲಿ ರಾಜಿ ಮಾತುಕತೆ ನಡೆದಿತ್ತು. ಈ ವೇಳೆ ಉದ್ಯಮಿಗೆ ಸುಧಾಕರ್​ ಚೆಕ್​ ನೀಡಿದ್ದರು. ಈ ಚೆಕ್​ ಬ್ಯಾಂಕ್​ಗೆ ಹಾಕಿದಾಗ ಬೌನ್ಸ್ ಆಗಿತ್ತು.

ಸಾಲ ನೀಡಿದ ಉದ್ಯಮಿ ನಿರ್ಮಾಪಕರ ವಿರುದ್ಧ ಹಾಸನದ ನಾಲ್ಕನೇ ಜೆ‌ಎಂಎಫ್​ಸಿ ನ್ಯಾಯಾಲಯದ ಮೊರೆ ಹೋಗಿದ್ದರು. 2020ರ ಜನವರಿ 27ರಂದು ಈ ಪ್ರಕರಣವನ್ನು ವಿಚಾರಣೆ ನಡೆಸಿದ ಕೋರ್ಟ್ ಸುಧಾಕರ್​ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ, ಐದು ಕೋಟಿ ಪರಿಹಾರ ನೀಡಲು ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಸುಧಾಕರ್​ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಈಗ ಈ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದ್ದು, ಕೆಳ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿದೆ. ಆದ್ದರಿಂದ ಸುಧಾಕರ್​ ಶಿಕ್ಷೆ ಜತೆಗೆ ಐದು ಕೋಟಿ ಪರಿಹಾರ ನೀಡಬೇಕಾಗಿದೆ.

ಸುಧಾಕರ್ ಅವರು ‘ಕಥಾ ವಿಚಿತ್ರ’, ‘ಹುಲಿ ದುರ್ಗ’ ಮೊದಲಾದ ಚಿತ್ರಗಳನ್ನು ನಿರ್ಮಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next