Advertisement

ತೈಲ ಟ್ಯಾಂಕ್‌ ಸ್ವಚ್ಛಗೊಳಿಸುತ್ತಿದ್ದ ವೇಳೆ ಅವಘಡ: ಉಸಿರುಗಟ್ಟಿ 7 ಕಾರ್ಮಿಕರ ದುರ್ಮರಣ

01:11 PM Feb 09, 2023 | Team Udayavani |

ಆಂಧ್ರಪ್ರದೇಶ: ತೈಲಗಾರದ ಟ್ಯಾಂಕ್‌ ಸ್ವಚ್ಛಗೊಳಿಸುತ್ತಿದ್ದ ವೇಳೆ 7 ಮಂದಿ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಕಾಕಿನಡ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದೆ.

Advertisement

ಕಾಕಿನಡ ಜಿಲ್ಲೆಯ ಅಂಬಟಿ ಸುಬ್ಬಣ್ಣಎಂಬ ತೈಲ ಕಾರ್ಖಾನೆಯಲ್ಲಿ ಟ್ಯಾಂಕ್‌ ಸ್ವಚ್ಛಗೊಳಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆಯೆಂದು ಹೇಳಲಾಗಿದೆ.  ಟ್ಯಾಂಕ್‌ ಸ್ವಚ್ಛಗೊಳಿಸಲು ಕಾರ್ಮಿಕರು ಒಬ್ಬೊಬ್ಬರಾಗಿ ಟ್ಯಾಂಕ್‌ ಒಳಗೆ ಇಳಿದಿದ್ದು ಸ್ಥಳದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ವೆಚಂಗಿ ಕೃಷ್ಣ,  ವೆಚಂಗಿ ನರಸಿಂಹಂ, ವೆಚಂಗಿ ಸಾಗರ್‌, ಕೊರತಡು ಬಾಬು, ಕರಿ ರಾಮ ರಾವ್‌, ಕಟ್ಟಮುರಿ ಜಗದೀಶ್‌, ಪ್ರಸಾದ್‌ ಎಂದು ಗುರುತಿಸಲಾಗಿದೆ.

ಮೃತ 7 ಮಂದಿ ಕಾರ್ಮಿಕರು ಕೂಡಾ ಕೇವಲ 10 ದಿನದ ಮೊದಲಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದರು ಎಂದು ಕಾರ್ಖಾನೆ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ದುರಂತ ನಡೆದ ತೈಲ ಕಾರ್ಖಾನೆ, ಕಾರ್ಖಾನೆ ಕಾಯ್ದೆಯ ಅಡಿಯಲ್ಲಿ ಗುರುತಿಸಿಕೊಂಡಿಲ್ಲ. ಅಲ್ಲದೆ ಕಲುಷಿತವಾದ ಅನಿಲವನ್ನು ಸೇವಿಸಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಮಾಹಿತಿ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next