Advertisement

ಪ.ಮಿಡ್ನಾಪುರ: ಬಸ್ಸು ಮಗುಚಿ ಆರು ಸಾವು, 20 ಮಂದಿಗೆ ಗಾಯ

04:59 PM Jun 16, 2018 | Team Udayavani |

ಮಿಡ್ನಾಪುರ, ಪಶ್ಚಿಮ ಬಂಗಾಲ : ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಇಂದು ವೇಗವಾಗಿ ಧಾವಿಸುತ್ತಿದ್ದ ಪ್ರಯಾಣಿಕರ ಬಸ್ಸೊಂದು ಮಗುಚಿ ಬಿದ್ದ ಪರಿಣಾಮವಾಗಿ ಆರು ಮಂದಿ ಮೃತಪಟ್ಟು ಇತರ 20 ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ.

Advertisement

ಇದೇ ಜಿಲ್ಲೆಯ ಸಿಲ್ಡಾದಲ್ಲಿನ ಉತ್ಸವಕ್ಕೆ ಹೋಗಲು ಸುಮಾರು 50 ಮಂದಿ ಬುಡಕಟ್ಟು ಜನರು ಸಲ್‌ಬಾನಿ ಪೊಲೀಸ್‌ ಠಾಣೆ ವ್ಯಾಪ್ತಿಯ ಪಿರಕತಾ ಎಂಬಲ್ಲಿಂದ ಬಸ್ಸನ್ನು ಗೊತ್ತುಮಾಡಿಕೊಂಡಿದ್ದರು. 

ಜಿಟ್ಕಾ ಎಂಬಲ್ಲಿ  ತೀಕ್ಷ್ಣ ತಿರುವೊಂದನ್ನು ನಿಭಾಯಿಸುವಲ್ಲಿ ಚಾಲಕನು ವಿಫ‌ಲನಾದ ಕಾರಣ ಬಸ್ಸು ಒಂದು ಬದಿಗೆ ಮಗುಚಿ ಬಿತ್ತು. ಪರಿಣಾಮವಾಗಿ 6 ಮಂದಿ ಮೃತಪಟ್ಟರು; 20 ಮಂದಿ ಗಾಯಗೊಂಡರು ಎಂದು ಪೊಲೀಸರು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next